ತಿರುವನಂತಪುರ: ಡೆಪ್ಯೂಟಿ ಸ್ಪೀಕರ್ ಚಿತ್ತಯಂ ಗೋಪಕುಮಾರ್ ದೇಶಾಭಿಮಾನಿ ದಿನಪತ್ರಿಕೆಯನ್ನು ಟೀಕಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುದ್ದಿಯಲ್ಲಿ ಅವರ ಹೆಸರು ಮತ್ತು ಚಿತ್ರವನ್ನು ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಅವರು ಸಿಪಿಐ ಪ್ರತಿನಿಧಿಯಾಗಿರುವುದರಿಂದ ಅವರನ್ನು ಹೊರಗಿಡಲಾಗಿದೆ ಎಂದು ಅವರು ಹೇಳಿದ್ದು, ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯೇ ಎಂದು ಕೇಳಿರುವರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿತ್ತು. ಸಚಿವರಾದ ಕೆ ರಾಧಾಕೃಷ್ಣನ್, ವಿ ಶಿವಂ ಕುಟ್ಟಿ ಮತ್ತು ಉಪಸಭಾಪತಿ ಚಿತ್ತಯಂ ಗೋಪಕುಮಾರ್, ಕಡಕಂಪಳ್ಳಿ ಸುರೇಂದ್ರನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆದರೆ ಚಿತ್ತಯಂ ಗೋಪಕುಮಾರ್ ಹೆಸರನ್ನು ಮಾತ್ರ ಕೈಬಿಟ್ಟಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ. ಏತನ್ಮಧ್ಯೆ, ವಿವಾದದ ಹಿನ್ನೆಲೆಯಲ್ಲಿ ಚಿತ್ತಯಂ ಗೋಪಕುಮಾರ್ ತಮ್ಮ ಫೇಸ್ಬುಕ್ ಪೋಸ್ಟ್ ಅನ್ನು ಹಿಂಪಡೆದಿದ್ದಾರೆ.
ಚಿತ್ತಯಂ ಗೋಪಕುಮಾರ್ ಅವರ ಫೇಸ್ ಬುಕ್ ಪೋಸ್ಟ್:
ಇದು ಏಪ್ರಿಲ್ 15ರಂದು ದೇಶಾಭಿಮಾನಿ ಪತ್ರಿಕೆ ಪ್ರಕಟಿಸಿದ ಚಿತ್ರ ಮತ್ತು ಸುದ್ದಿ. ಸಚಿವರಾದ ಕೆ ರಾಧಾಕೃಷ್ಣನ್ ಮತ್ತು ವಿ ಶಿವಂಕುಟ್ಟಿ ಮತ್ತು ನಾನು ಉಪಸಭಾಪತಿಯಾಗಿ ಏಪ್ರಿಲ್ 14 ರಂದು ಅಂಬೇಡ್ಕರ್ ದಿನಾಚರಣೆಯಂದು ವಿಧಾನಸಭೆಯಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಿದ್ದೆವು. ವಿಧಾನಸೌಧದಲ್ಲಿ ವಾಚ್ ಅಂಡ್ ವಾರ್ಡಿನ ಗೌರವ ವಂದನೆ ಸ್ವೀಕರಿಸಿದವರೂ ನಾನೇ. ಬಳಿಕ ನಾನು ಮತ್ತು ಮಂತ್ರಿಗಳು ಸೇರಿ ಪುಷ್ಪಾರ್ಚನೆ ನಡೆಸಿದೆವು. ಆದರೆ ದೇಶಾಭಿಮಾನಿ ಸುದ್ದಿ ಪ್ರಕಟಿಸಿದಾಗ ನನ್ನ ಹೆಸರು ಕೈಬಿಡಲಾಗಿತ್ತು.
ಇದೇನಾ ಸಾಮಾಜಿಕ ನ್ಯಾಯ?
ಇದೇನಾ ಸಮಾನತೆ?
ನಾನು ಸಿಪಿಐ ಪ್ರತಿನಿಧಿ ಎಂಬ ಕಾರಣಕ್ಕೆ ನನ್ನನ್ನು ಹೊರಗಿಡಲಾಗಿದೆಯೇ?




.jpg)
