ತಿರುವನಂತಪುರಂ: ಗೂಂಡಾಗಳ ಮೇಲೆ ನಿಷ್ಕøಪೆಯಿಂದ ಕ್ರಮ ಜರಗಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೋಲೀಸರಿಗೆ ಸೂಚಿಸಿದ್ದಾರೆ. ಪೋಲೀಸರು ಅರ್ಜಿ ಸಲ್ಲಿಸಿದರೆ ಮೂರು ವಾರದೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅನಾವಶ್ಯಕವಾಗಿ ಕಾಪ ವಿಧಿಸಬಾರದು ಎಂದು ಸ್ಪಷ್ಟಪಡಿಸಿದರು. ನಿನ್ನೆ ನಡೆದ ತುರ್ತು ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಕಾಪ್ಪ ಕಾಯಿದೆಯನ್ನು ನಿಷ್ಪಲಗೊಳಿಸಿದ್ದರಿಂದ ಗೂಂಡಾಗಳು ರಾಜ್ಯವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪೆÇಲೀಸ್ ವರದಿ ತಿಳಿಸಿದೆ. ಜಿಲ್ಲಾಧಿಕಾರಿಗಳೊಂದಿಗೆ ಡಿಐಜಿಗೆ ಅಧಿಕಾರ ನೀಡುವ ಮೂಲಕ ಕಾಪ್ಪಾ ಕಾಯಿದೆಯನ್ನು ಬಲಪಡಿಸಲು ಪೋಲೀಸರು ಗೃಹ ಇಲಾಖೆಯನ್ನು ಸಂಪರ್ಕಿಸಿದ್ದರು. ಗೂಂಡಾಗಳ ಪಟ್ಟಿಯನ್ನು ಕಾಪ್ಪದಲ್ಲಿ ಬಂಧಿಯಾಗುವಂತೆ ನೀಡಿದರೆ ಅದನ್ನು ತಿರಸ್ಕರಿಸುವ ಧೈರ್ಯ ಜಿಲ್ಲಾಧಿಕಾರಿಗಳಿಗೆ ಬರುತ್ತದೆ ಎಂದು ಗುಪ್ತಚರರು ಪತ್ತೆ ಹಚ್ಚಿದ್ದರು. ಪರಿಸ್ಥಿತಿ ಗಂಭೀರ ಪರಿಣಾಮ ಬೀರಲಿದೆ ಎಂಬ ಗುಪ್ತಚರ ವರದಿ ಆಧರಿಸಿ ಸಿಎಂ ತುರ್ತು ಸಭೆ ನಡೆಸಿದ್ದಾರೆ.
‘ಆಪರೇಷನ್ ಗಾರ್ಡ್’ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಗೂಂಡಾ ದಾಳಿ ನಿತ್ಯ ನಡೆಯುತ್ತಿರುವುದರಿಂದ ಕಾಪ್ಪ ಕಾಯಿದೆ ಜಾರಿಗೊಳಿಸಲು ಪೋಲೀಸರು ನಿರ್ಧರಿಸಿದ್ದಾರೆ. ಗೂಂಡಾಗಳನ್ನು ಹತ್ತಿಕ್ಕಲು 2007ರಲ್ಲಿ ಕಾಪ್ಪ ಕಾಯಿದೆ ಜಾರಿಗೆ ತರಲಾಗಿತ್ತು. ಏಳು ವರ್ಷಗಳೊಳಗೆ ಮೂರು ದರೋಡೆಕೋರ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೆ, ಮತ್ತಷ್ಟು ಅಪರಾಧಗಳನ್ನು ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಆರೋಪಿಯನ್ನು ಜೈಲಿನಲ್ಲಿಡಲು ಜಿಲ್ಲಾ ಪೆÇಲೀಸ್ ಮುಖ್ಯಸ್ಥರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬಹುದು. ಜಿಲ್ಲಾಧಿಕಾರಿ ಆದೇಶ ನೀಡಿದರೆ ಆರು ತಿಂಗಳವರೆಗೆ ಬಂಧನದಲ್ಲಿಡಬಹುದು.





