HEALTH TIPS

ಮುಖ್ಯಮಂತ್ರಿಗಳ ಸ್ವಕ್ಷೇತ್ರ ಧರ್ಮಡಂನಲ್ಲಿ ಮತ್ತೆ ಸಂಘರ್ಷ: ಪೋಲೀಸರೊಂದಿಗೆ ಜಗಳವಾಡಿ ಕಲ್ಲು ಕಿತ್ತೆಸೆದ ಗ್ರಾಮಸ್ಥರು

                  ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕ್ಷೇತ್ರ ಧರ್ಮಡಂನಲ್ಲಿ ಕೆ-ರೈಲ್ ವಿರುದ್ಧ ಮತ್ತೆ ಘರ್ಷಣೆ ನಡೆದಿದೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸರ್ವೇ ಕಲ್ಲು ನಿರ್ಮಿಸಲು ಆಗಮಿಸಿದ ಅಧಿಕಾರಿಗಳನ್ನು ಸ್ಥಳೀಯರು ತಡೆದರು. ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳನ್ನು ತಡೆದರು.  ಬೆಳಗ್ಗೆ ಧರ್ಮಡಂ  ಕೆ-ರೈಲ್ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ.

                       ಸಾಮಾನ್ಯ ಜನರನ್ನು ಕೊಂದು ಅಭಿವೃದ್ಧಿ ಯಾರಿಗಾಗಿ. ಮನೆಯ ಹೆಸರಿನಲ್ಲಿ ಸಾಕಷ್ಟು ಸಾಲಗಳಿವೆ. ಆ ಮನೆಯಿಂದ ಹೊರಗೆ ಹೋಗಬೇಕಾದರೆ ಏನು ಮಾಡಬೇಕು. ಏನಾದರೂ ಆಗಿದ್ದರೆ ಮುಖ್ಯಮಂತ್ರಿಗಳು ಸಮಾಧಾನ ಪಡಿಸಬೇಕು. ಸಿಎಂ ಮನೆ ಮುಂದೆ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಪ್ರತಿಭಟನೆ ನಿರತ ಮಹಿಳೆಯರು ಹೇಳಿದರು. ಸ್ಥಳೀಯರ ಪ್ರತಿಭಟನೆಯಿಂದ ಧರ್ಮಡಂ ಪಂಚಾಯಿತಿಯಲ್ಲಿ ಕೆ ರೈಲ್ವೆ ಸರ್ವೆ ಕಲ್ಲು ಅಳವಡಿಸಲು ಸಾಧ್ಯವಾಗಿಲ್ಲ. ಸರ್ವೆ ನಿಲ್ಲಿಸಿ ಅಧಿಕಾರಿಗಳು ಹಿಂತಿರುಗಿದರು.

               ಮೊನ್ನೆ ಮತ್ತು ನಿನ್ನೆ ಬೆಳಗ್ಗೆ ಇಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಧಿಕಾರಿಗಳು ಅಳವಡಿಸಿದ ಕಲ್ಲನ್ನು ಸ್ಥಳೀಯರು ತೆಗೆದೆಸೆದಿದ್ದರು. ಇದೇ ಸ್ಥಳದಲ್ಲಿ ಅಧಿಕಾರಿಗಳು ಮತ್ತೆ ಕಲ್ಲು ನಿರ್ಮಿಸಲು ಪ್ರಯತ್ನ ನಡೆಯಿತು.  ಮಹಿಳೆಯರೇ ಸ್ಥಳಕ್ಕಾಗಮಿಸಿ ಕಿತ್ತೆಸೆದರು. ಪೋಲೀಸರು ನೋಟಕರಾಗಿದ್ದರು. ಪೋಲೀಸರೊಂದಿಗೆ ವಾಗ್ವಾದದ ಸಂದರ್ಭದಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡರು. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries