ಕೊಲ್ಲಂ: ಜನರನ್ನು ವಿಭಜಿಸುವ ಆರ್ಎಸ್ಎಸ್ ಅಜೆಂಡಾ ಲವ್ ಜಿಹಾದ್ ಎಂದು ಸಚಿವ
ಮುಹಮ್ಮದ್ ರಿಯಾಝ್ ಹೇಳಿರುವರು. ಲವ್ ಜಿಹಾದ್ ಭಾರತದಲ್ಲಿಲ್ಲ ಎಂದರು. ಡಿ.ವೈ.ಎಫ್.ಐ
ಮೊಹಮ್ಮದ್ ರಿಯಾಝ್ ಅಂಚಲುಮೂಡುವಿನಲ್ಲಿ ಕೊಲ್ಲಂ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತಾಂತರ ಮಾಡಲು ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಯಸ್ಕರು ಕಾನೂನುಬದ್ಧವಾಗಿ ಮದುವೆಯಾಗಬಹುದು ಎಂದು ಸಂವಿಧಾನ ಹೇಳುತ್ತದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸಿ ಬಿಜೆಪಿಯವರು ಶಾಸನ ರಚಿಸುತ್ತಿದ್ದಾರೆ ಎಂದು ಮೊಹಮ್ಮದ್ ರಿಯಾಜ್ ಹೇಳಿದರು.
ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಉತ್ತರಪ್ರದೇಶವೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ. 51 ಜನರನ್ನು ಬಂಧಿಸಲಾಗಿದೆ. ಈ ಪೈಕಿ 49 ಮಂದಿ ಇನ್ನೂ ಜೈಲಿನಲ್ಲಿದ್ದಾರೆ. ಬಿಜೆಪಿ ಆಡಳಿತವಿರುವ ಹರ್ಯಾಣ ಮತ್ತು ಮಧ್ಯಪ್ರದೇಶದಲ್ಲಿ ಇದೇ ರೀತಿಯ ಕಾನೂನು ಜಾರಿಯಾಗುತ್ತಿದೆ.
ಲವ್ ಜಿಹಾದ್ ಎಂಬುದು ಬಡತನ, ಹಸಿವಿನಿಂದ ಕಂಗೆಟ್ಟಿರುವ ಜನರನ್ನು ವಿಭಜಿಸಲು ಬಿಜೆಪಿಯ ಸುಳ್ಳು ಬಾಂಬ್ ಆಗಿದೆ. ಮುತ್ವಾಲಾಖ್ ಮತ್ತು ಲಕ್ಷದ್ವೀಪಗಳಲ್ಲಿ ಪೌರತ್ವ ವಿಚಾರದಲ್ಲಿ ಇದು ನಿಖರವಾಗಿ ಕಂಡುಬಂದಿದೆ. ಇದು ಜನರನ್ನು ಒಡೆಯುವ ತಂತ್ರ. ಇಸ್ಲಾಮೋಫೋಬಿಯಾವನ್ನು ಚುಚ್ಚಲು ಆರ್ಎಸ್ಎಸ್ ಲವ್ ಜಿಹಾದ್ ಅನ್ನು ಸಾಧನವಾಗಿ ಬಳಸುತ್ತಿದೆ ಎಂದು ಮೊಹಮ್ಮದ್ ರಿಯಾಜ್ ಆರೋಪಿಸಿದ್ದಾರೆ.
ಕೋಝಿಕ್ಕೋಡ್ ಡಿವೈಎಫ್ಐ ಪ್ರಾದೇಶಿಕ ಕಾರ್ಯದರ್ಶಿ ಶೆಜಿನ್ ಅವರು ಮುಸ್ಲಿಮೇತರ ಯುವತಿಯನ್ನು ವಿವಾಹವಾಗುವುದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಜಿಲ್ಲಾ ಸಮಿತಿ ಸದಸ್ಯ ಜಾರ್ಜ್ ಎಂ ಥಾಮಸ್ ಮಾಡಿದ ಮಾತು ವಿವಾದಕ್ಕೀಡಾಗಿತ್ತು. ಲವ್ ಜಿಹಾದಿ ಎಂದು ಆರೋಪಿಸಿ ಬಾಲಕಿಯ ಮನೆಯವರು ಹಾಗೂ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ರಿಯಾಜ್ ಲವ್ ಜಿಹಾದ್ ಬಿಜೆಪಿಯ ಸುಳ್ಳು ಬಾಂಬ್ ಎಂದು ಆರೋಪಿಸಿದ್ದಾರೆ.