HEALTH TIPS

1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿಯಾದ 282 ಯೋಧರ ಅಸ್ಥಿಪಂಜರ ಪತ್ತೆ

          ಚಂಡೀಗಡ: ಬ್ರಿಟಿಷರ ವಿರುದ್ಧ 1857ರಲ್ಲಿ ನಡೆದ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮೃತಪಟ್ಟ 282 ಭಾರತೀಯ ಯೋಧರ ಅಸ್ಥಿಪಂಜರಗಳು ಅಮೃತಸರದ ಸಮೀಪ ಉತ್ಖನನದ ವೇಳೆ ಪತ್ತೆಯಾಗಿವೆ ಎಂದು ಪಂಜಾಬ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಜೆಎಸ್ ಶೆರಾವತ್ ತಿಳಿಸಿದ್ದಾರೆ.

               ಹಂದಿ ಮತ್ತು ದನದ ಮಾಂಸಗಳನ್ನು ಸವರಿದ ಕ್ಯಾರ್ಟ್ರಿಜ್‌ಗಳನ್ನು ಬಳಸಲು ನಿರಾಕರಿಸಿದ್ದ ಈ ಸೈನಿಕರು, ಬ್ರಿಟಿಷರ ವಿರುದ್ಧ ಬಂಡಾಯವೆದ್ದಿದ್ದರು ಎನ್ನಲಾಗಿದೆ. "ಈ 282 ಅಸ್ಥಿಪಂಜರಗಳು 1857ರಲ್ಲಿ ಬ್ರಿಟಿಷರ ವಿರುದ್ಧದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ವೇಳೆ ಮೃತಪಟ್ಟ ಭಾರತದ ಸೈನಿಕರದ್ದಾಗಿವೆ. ಪಂಜಾಬ್‌ನ ಅಮೃತಸರದ ಸಮೀಪ ಅಜ್ನಲಾದಲ್ಲಿ ಧಾರ್ಮಿಕ ಕಟ್ಟಡವೊಂದರ ಅಡಿಯಲ್ಲಿನ ಬಾವಿಯಿಂದ ಇವುಗಳನ್ನು ಹೊರಗೆ ತೆಗೆಯಲಾಗಿದೆ" ಎಂದು ಶೆರಾವತ್ ಅವರು ತಿಳಿಸಿದ್ದಾರೆ.

                      6 ಅಡಿ ಉದ್ದದ ಮನುಷ್ಯನ ಅಸ್ಥಿಪಂಜರ ಪತ್ತೆ: ಮಧುರೈ ಬಳಿ ಕೀಳಡಿ ನಾಗರಿಕತೆಯ ಬೆನ್ನತ್ತಿ...!

             "ಈ ಸೈನಿಕರು ಹಂದಿ ಮತ್ತು ದನದ ಮಾಂಸವನ್ನು ಸವರಿದ ಮದ್ದುಗುಂಡುಗಳನ್ನು ಬಳಸುವುದರ ವಿರುದ್ಧ ದಂಗೆ ಎದ್ದಿದ್ದರು ಎಂದು ಅಧ್ಯಯನ ತಿಳಿಸಿದೆ. ನಾಣ್ಯಗಳು, ಪದಕಗಳು, ಡಿಎನ್‌ಎ ಅಧ್ಯಯನ, ಭೌತಿಕ ವಿಶ್ಲೇಷಣೆಗಳು, ಮಾನವಶಾಸ್ತ್ರೀಯ ಅಧ್ಯಯನ, ರೇಡಿಯೋ- ಕಾರ್ಬನ್ ಡೇಟಿಂಗ್ ಮುಂತಾದ ಎಲ್ಲ ಬಗೆಯ ಅಧ್ಯಯನಗಳೂ ಇದೇ ಅಂಶವನ್ನು ಹೇಳುತ್ತವೆ" ಎಂದು ಶೆರಾವತ್ ತಿಳಿಸಿದ್ದಾರೆ.

               1857ರಲ್ಲಿ ಬ್ರಿಟಿಷರ ವಿರುದ್ಧ ದೇಶಾದ್ಯಂತ ಅನೇಕ ಭಾಗಗಳಲ್ಲಿ ತೀವ್ರ ಕದನಗಳು ನಡೆದಿದ್ದವು. ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಇತಿಹಾಸಕಾರರು ಕರೆದಿದ್ದಾರೆ. ಬ್ರಿಟಿಷ್ ಸೈನ್ಯದಲ್ಲಿ ನೇಮಕಗೊಂಡಿದ್ದ ಭಾರತದ ಕೆಲವು ಸೈನಿಕರು ದನ ಮತ್ತು ಹಂದಿಯ ಮಾಂಸಗಳನ್ನು ಲೇಪಿಸಿದ ಮದ್ದುಗುಂಡುಗಳನ್ನು ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಬಳಸಲು ನಿರಾಕರಿಸಿದ್ದರು. ಈ ವೇಳೆ ಬ್ರಿಟಿಷರ ವಿರುದ್ಧ ಅವರು ಸಿಡಿದೆದ್ದಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries