ಗುವಾಹಟಿ: ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಮತ್ತು ನೆರೆಯಿಂದ ಅಸ್ಸಾಂ ತತ್ತರಿಸಿದ್ದು,ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಕೆಲವೆಡೆಗಳಲ್ಲಿ ಭೂಕುಸಿತಗಳು ವರದಿಯಾಗಿವೆ.
ನಿರಂತರ ಮಳೆಯಿಂದಾಗಿ 12 ಗ್ರಾಮಗಳಲ್ಲಿ ಭೂಕುಸಿತಗಳು ಸಂಭವಿಸಿವೆ.
15 ಕಂದಾಯ ವಲಯಗಳಡಿಯ ಸುಮಾರು 222 ಗ್ರಾಮಗಳು ನೆರೆಯಿಂದ ತತ್ತರಿಸಿದ್ದು,ಸುಮಾರು 10,321.44 ಹೆಕ್ಟೇರ್ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ. ರಾಜ್ಯದಲ್ಲಿಯ ಸಾವಿರಾರು ಪ್ರಾಣಿಗಳೂ ನೆರೆಯಿಂದ ಬಾಧಿತಗೊಂಡಿವೆ. ಈವರೆಗೆ 200ಕ್ಕೂ ಅಧಿಕ ಮನೆಗಳು ಮತ್ತು ವಸತಿ ಪ್ರದೇಶಗಳಿಗೆ ಹಾನಿಯಾಗಿದೆ.ಭಾರೀ ಭೂಕುಸಿತಗಳು ಮತ್ತು ನೆರೆಯಿಂದಾಗಿ ಹಲವಾರು ಪ್ರಯಾಣಿಕರು ದಿತೋಕಚೇರಾ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು,ಈ ಪೈಕಿ 119 ಪ್ರಯಾಣಿಕರನ್ನು ಭಾರತೀಯ ವಾಯು ಪಡೆಯು ಸಿಲ್ಚಾರ್ಗೆ ಸಾಗಿಸಿದೆ. ಉಳಿದವರನ್ನು ಬದರ್ಪುರ ಮತ್ತು ಇತರ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.