HEALTH TIPS

ದ್ವೇಷ ಭಾಷಣ: ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲಿರುವ ಪಿಸಿ ಜಾರ್ಜ್: ಸೋಮವಾರ ಅರ್ಜಿ ಸಲ್ಲಿಕೆ

               ಕೊಚ್ಚಿ: ಎರ್ನಾಕುಳಂ ವೆನ್ನಾಲದಲ್ಲಿ ದ್ವೇಷ ಭಾಷಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪಿಸಿ ಜಾರ್ಜ್ ಹೈಕೋರ್ಟ್‍ಗೆ ಮೊರೆ ಹೋಗಲಿದ್ದಾರೆ. ಎರ್ನಾಕುಳಂ ಜಿಲ್ಲಾ ಸೆಷನ್ಸ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ನಿನ್ನೆ ತಿರಸ್ಕರಿಸಿದ ನಂತರ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸೋಮವಾರ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗುವುದು. ರಾಜಕೀಯ ಉದ್ದೇಶದಿಂದ ಸರ್ಕಾರ ತನ್ನ ವಿರುದ್ಧ ಹಗೆ ಸಾಧಿಸುತ್ತಿದ್ದು, ವಂಚಕ ಸರ್ಕಾರ ಎಂದು ಪಿಸಿ ಜಾರ್ಜ್ ಆರೋಪಿಸಿದರು. ತೃಕ್ಕಾಕರ ಉಪಚುನಾವಣೆಯಲ್ಲಿ ರಾಜಕೀಯ ಲಾಭದ ಆಧಾರದ ಮೇಲೆ ಪ್ರಕರಣ ನಡೆದಿದ್ದು, ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಿಯತ್ತಾಗಿ ಮಾತನಾಡುವೆ ಎಂದು ಪಿಸಿ ಜಾರ್ಜ್ ಹೇಳಿಕೆ ನೀಡಿರುವರು.

               ಜಾಮೀನು ಅರ್ಜಿ ತಿರಸ್ಕøತಗೊಂಡ ಹಿನ್ನೆಲೆಯಲ್ಲಿ ಪಿಸಿ ಜಾರ್ಜ್ ಪುತ್ರ ಸೀನ್ ಜಾರ್ಜ್ ಪ್ರತಿಕ್ರಿಯಿಸಿದ್ದು, ಹೈಕೋರ್ಟ್‍ನಿಂದ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ತಿರುವನಂತಪುರಂನಲ್ಲಿ ಇದೇ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನು ರದ್ದುಗೊಳಿಸಲು ಪ್ರಕರಣ ದಾಖಲಿಸಲಾಗಿದೆ ಎಂದು ಸೀನ್ ಜಾರ್ಜ್ ಆರೋಪಿಸಿದ್ದಾರೆ. 34 ನಿಮಿಷಗಳ ಭಾಷಣದ ಭಾಗಗಳನ್ನು ಕತ್ತರಿಸುವ ಮೂಲಕ ದೂರು ನೀಡಲಾಗಿದೆ ಎಂದು ಸೀನ್ ಜಾರ್ಜ್ ಹೇಳಿದರು, ಆದ್ದರಿಂದ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

               ಇದೇ ವೇಳೆ ಪಿಸಿ ಜಾರ್ಜ್ ವಿರುದ್ಧ ಧಾರ್ಮಿಕ ದ್ವೇಷದ ಪ್ರಕರಣ ದಾಖಲಿಸಲು ಕಾರಣವಾದ ಭಾಷಣವನ್ನು ಕೋರ್ಟ್ ಖುದ್ದು ಕೇಳಿಸಿಕೊಳ್ಳಲಿದೆ.  ನ್ಯಾಯಾಲಯದ ಕೊಠಡಿಯಲ್ಲಿ ಭಾಷಣ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡುವಂತೆ ಸೈಬರ್ ಪೋಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಪಿಸಿ ಜಾರ್ಜ್ ಜಾಮೀನು ರದ್ದು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ಸೋಮವಾರ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಲು ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries