ನವದೆಹಲಿ: ಕಾಡುಹಂದಿಯನ್ನು ಪರಾವಲಂಬಿ ಎಂದು ಘೋಷಿಸಲು ಯಾವುದೇ ಕಾನೂನು ಅಡ್ಡಿ ಇಲ್ಲ ಎಂದು ಕೇಂದ್ರ ಹೇಳಿದೆ. ಜನರ ಜೀವ ಮತ್ತು ಆಸ್ತಿಗೆ ಧಕ್ಕೆ ತರುವ ಪ್ರಾಣಿಗಳನ್ನು ಕೀಟಗಳೆಂದು ಘೋಷಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಕೇಂದ್ರ ಹೇಳಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವ ಭೂಪೇಂದ್ರ ಯಾದವ್ ಅವರು ಸಚಿವ ಕೆ ಮುರಳೀಧರನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 11 (1) (ಬಿ) ಅಡಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಕೀಟಗಳೆಂದು ಘೋಷಿಸಲು ರಾಜ್ಯಗಳಿಗೆ ಅಧಿಕಾರವಿದೆ ಎಂದರು.
ವÀನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ 1, 2 ಮತ್ತು 3 ರ ಅಡಿಯಲ್ಲಿ ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಅಂತಹ ಪ್ರಾಣಿಗಳನ್ನು ಕೊಲ್ಲಬಹುದು. ಅವುಗಳ ಆವಾಸಸ್ಥಾನದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದ ರೀತಿಯಲ್ಲಿ ಕಾಡು ಹಂದಿಯನ್ನು ಕೊಲ್ಲುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಮಾಹಿತಿ ನೀಡಿರುವರು.
ಈ ಮಧ್ಯೆ ಈಗಾಗಲೇ ಜನರ ಜೀವ ಮತ್ತು ಆಸ್ತಿಪಾಸ್ತಿಗೆ ಧಕ್ಕೆ ತರುವ ಕಾಡುಹಂದಿಗಳನ್ನು ಹನನಗೈಯ್ಯಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನುಮತಿ ನೀಡಲು ರಾಜ್ಯ ಸಚಿವ ಸಂಪುಟ ಬುಧವಾರ ನಿರ್ಧರಿಸಿತ್ತು.
ವನ್ಯಜೀವಿ ಕಾಯಿದೆಯಡಿ ಗೌರವ ವನ್ಯಜೀವಿ ವಾರ್ಡ್ ಆಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು ಮತ್ತು ಪಾಲಿಕೆ ಮೇಯರ್ ನೇಮಕಕ್ಕೆ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ವಿವರಣೆ ನೀಡಿದೆ.
100 ಎಕರೆವರೆಗಿನ ಕಿರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಕಾಡುಹಂದಿಯನ್ನು ನಿಯಂತ್ರಿಸಲಿದೆ. ಹತ್ಯೆ ಮಾಡಿದ ಕಾಡುಹಂದಿಯ ಶವವನ್ನು ವೈಜ್ಞಾನಿಕವಾಗಿ ಹೂಳಬೇಕು. ಅದರ ವಿವರಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ರಿಜಿಸ್ಟರ್ನಲ್ಲಿ ಕಾಪಿಡಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಸಾರ್ವಜನಿಕ ಜಾಗೃತಿ ಸಮಿತಿಗಳ ಸೇವೆಯನ್ನು ಅಗತ್ಯವಿದ್ದರೆ ಹತ್ಯೆ ಮತ್ತು ಶವ ನಿರ್ವಹಣೆಗೆ ಬಳಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.




.webp)
