ಗಾಂಧಿನಗರ: ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಭಗ್ನಪ್ರೇಮಿಯೊಬ್ಬ ಆಕೆಯ ತಂಗಿಯ ಮೇಲೆ ಸೇಡು ತೀರಿಸಿಕೊಂಡಿದ್ದಾನೆ! ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡಿರುವ ಮೂಲಕ ನೂತನ ವಧು-ವರರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.
ಗಾಂಧಿನಗರ: ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಭಗ್ನಪ್ರೇಮಿಯೊಬ್ಬ ಆಕೆಯ ತಂಗಿಯ ಮೇಲೆ ಸೇಡು ತೀರಿಸಿಕೊಂಡಿದ್ದಾನೆ! ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡಿರುವ ಮೂಲಕ ನೂತನ ವಧು-ವರರು ಆಸ್ಪತ್ರೆ ಸೇರುವಂತೆ ಮಾಡಿದ್ದಾನೆ.
ದಕ್ಷಿಣ ಗುಜರಾತ್ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೀಶ್ ಗವೀತ್ ಹಾಗೂ ಸಲ್ಮಾ ಎನ್ನುವವರ ಮದುವೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಲ್ಮಾಳ ಅಕ್ಕನ ಮಾಜಿ ಪ್ರೇಮಿ ರಾಜು ಪಟೇಲ್ ಎಂಬಾತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಮದುವೆಗೆ ಬಂದಿದ್ದ ಈತ ಒಂದು ಗಿಫ್ಟ್ ಕೊಟ್ಟು ಹೋಗಿದ್ದ. ಮದುವೆಯ ನಂತರ ಎಲ್ಲಾ ಗಿಫ್ಟ್ಗಳನ್ನು ವಧು-ವರರು ಮತ್ತು ಕುಟುಂಬಸ್ಥರು ತೆರೆಯುತ್ತಿದ್ದರು. ರಾಜು ಕೊಟ್ಟ ಗಿಫ್ಟ್ ಅನ್ನು ಮದುಮಗ ತೆರೆಯುತ್ತಿದ್ದ. ಅದರಲ್ಲಿ ರೀಚಾರ್ಜ್ ರೀತಿಯ ಒಂದು ವಸ್ತು ಕಾಣಿಸಿತು. ಅದನ್ನು ಪರಿಶೀಲನೆ ಮಾಡುತ್ತಿದ್ದಾಗಲೇ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ವರನ ಕಣ್ಣಿಗೆ ಭಾರಿ ಹಾನಿಯಾಗಿದೆ, ಮಾತ್ರವಲ್ಲದೇ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮದುಮಗಳು ಸಲ್ಮಾ ಕೂಡ ಆತನ ಪಕ್ಕದಲ್ಲಿಯೇ ಇದ್ದಳು. ಆಕೆ ಸೇರಿದಂತೆ ಅಲ್ಲಿದ್ದ ಸಂಬಂಧಿಕರಿಗೂ ಗಾಯಗಳಾಗಿವೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ವರ ಲತೀಶ್ ಗವೀತ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಪೊಲೀಸರಲ್ಲಿ ಈ ಕುರಿತು ದೂರು ದಾಖಲು ಮಾಡಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಈ ಉಡುಗೊರೆ ರಾಜು ನೀಡಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದಾಗ ಆತ ವಧುವಿನ ಅಕ್ಕನ ಮಾಜಿ ಬಾಯ್ ಫ್ರೆಂಡ್ ಎನ್ನುವುದು ತಿಳಿದುಬಂದಿದೆ. ಯಾರದ್ದೋ ಸಂಬಂಧಕ್ಕೆ ಇನ್ನಾರೋ ಆಸ್ಪತ್ರೆ ಸೇರುವಂತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.