ಅಸ್ಸಾಂ: ಅಸ್ಸಾಮ್ ನ ರಾಷ್ಟ್ರೀಯ ನಾಗರಿಕರ ನೋಂದಣಿಯ ಅಸ್ಸಾಂ ಸಂಯೋಜಕರು ತಮಗಿಂತ ಮುನ್ನ ಈ ಹುದ್ದೆಯಲ್ಲಿದ್ದ ಅಧಿಕಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಎನ್ಆರ್ ಸಿಯ ಮಾಜಿ ಮುಖ್ಯಸ್ಥರಾಗಿದ್ದ ಪ್ರತೀಕ್ ಹಜೇಲಾ ಹಾಗೂ ಇತರರ ವಿರುದ್ಧ ಎನ್ ಆರ್ ಸಿ ಅಪ್ಡೇಟ್ ಮಾಡುವ ಪ್ರಕ್ರಿಯೆಯಲ್ಲಿ ದೇಶವಿರೋಧಿ, ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿರುವ ಆರೋಪ ಮಾಡಿದ್ದಾರೆ ಹಿತೇಶ್ ದೇವ್ ಶರ್ಮ .
ಸಿಐಡಿ ಈ ಬಗ್ಗೆ ಇನ್ನಷ್ಟೇ ಎಫ್ಐಆರ್ ದಾಖಲಿಸಬೇಕಿದ್ದು, ಅಧಿಕಾರಿಗಳು, ಡೇಟಾ ಎಂಟ್ರಿ ಆಪರೇಟರ್ ಗಳ ವಿರುದ್ಧವೂ ಆರೋಪ ಕೇಳಿಬಂದಿದೆ. ಎನ್ ಆರ್ ಸಿ ಅಸ್ಸಾಮ್ ನಲ್ಲಿರುವ ಭಾರತೀಯರ ವಿಶ್ವಾಸಾರ್ಹ ದಾಖಲೆಯಾಗಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಅಪ್ಡೇಟ್ ಆಗಿದೆ. 2019 ರ ಆಗಸ್ಟ್ 31 ರಂದು ಬಿಡುಗಡೆಯಾಗಿತ್ತು. 19 ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು.