HEALTH TIPS

ರಾಜ್ಯದ ಪೆಟ್ರೋಲ್ ಪಂಪ್‍ಗಳಲ್ಲಿ ಬೃಹತ್ ವಂಚನೆ: ಸಚಿವ ಜಿ.ಆರ್.ಅನಿಲ್

                            ಕೊಚ್ಚಿ: ರಾಜ್ಯದಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ಗ್ರಾಹಕರಿಗೆ ದೊಡ್ಡ ವಂಚನೆಯಾಗುತ್ತಿದೆ ಎಂದು ಆಹಾರ ಸಚಿವ ಜಿ.ಆರ್.ಅನಿಲ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ  ಅವರು ಮಾತನಾಡಿದರು.

                          ಪಂಪ್‍ಗಳು ಬೃಹತ್ ಮಟ್ಟದಲ್ಲಿ ಹ್ಯಾಕ್ ಮಾಡುತ್ತಿವೆ  ಎಂಬ ಜನರ ಅನುಮಾನ ಸರಿಯಾಗಿದೆ ಎಂದು ಸಚಿವರು ಹೇಳಿದರು. 700 ಪಂಪ್ ಗಳನ್ನು ಪರಿಶೀಲಿಸಿದಾಗ 46 ಕಡೆಗಳಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ ಎಂದರು.

                     ಇದೇ ವೇಳೆ 2009ರಲ್ಲಿ ಬಿಪಿಎಲ್ ಪಟ್ಟಿಗೆ ಸೇರ್ಪಡೆಯಾಗದಿದ್ದರೂ ಬಿಪಿಎಲ್ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿರುವ ಕುಟುಂಬಗಳಿಗೆ ಸ್ಥಳೀಯಾಡಳಿತ  ಕಾರ್ಯದರ್ಶಿಗಳ ಪ್ರಮಾಣ ಪತ್ರದ ಆಧಾರದಲ್ಲಿ ಆದ್ಯತಾ ಪಡಿತರ ಚೀಟಿಗೆ 20 ಅಂಕಗಳನ್ನು ಪರಿಗಣಿಸುವಂತೆ ಆದೇಶ ನೀಡಲಾಯಿತು. ಇದು ಕೇರಳದ ದೊಡ್ಡ ವರ್ಗದ ಕುಟುಂಬಗಳ ದೀರ್ಘಕಾಲದ ಅಗತ್ಯವನ್ನು ಪರಿಹರಿಸುತ್ತದೆ ಎಂದು ಸಚಿವರು ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.

                   ಏಪ್ರಿಲ್ 2022 ರ ಪಡಿತರ ವಿತರಣೆಯು ಮೊನ್ನೆ (30.04.2022) ಕೊನೆಗೊಂಡಿದೆ.  ಮೇ 2022 ರ ಪಡಿತರ ವಿತರಣೆಯು ನಾಳೆಯಿಂದ(03.05.2022-ಮಂಗಳವಾರ) ದಿಂದ ಪ್ರಾರಂಭವಾಗಲಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳ ಪಡಿತರವನ್ನು ಇನ್ನೂ ಪಡೆಯದ ಪಡಿತರ ಚೀಟಿಗಳು ಮಾತ್ರ ಮೇ ತಿಂಗಳ ಪಡಿತರ ಜೊತೆಗೆ  ಉಳಿಕೆಯಾದ ಪಾಲನ್ನು ಪಡೆಯುತ್ತವೆ. ರಾಜ್ಯದ ಕೆಲವು ಪಡಿತರ ಅಂಗಡಿಗಳಲ್ಲಿ ಮಾತ್ರ ಆದ್ಯತಾ ರಹಿತ ಗೋಧಿ ದಾಸ್ತಾನು ಖಾಲಿಯಾಗಿದೆ.  ಎನ್‍ಪಿಎನ್‍ಎಸ್ (ಬಿಳಿ) ಮತ್ತು ಎನ್‍ಪಿಎಸ್ (ನೀಲಿ) ಪಡಿತರ ಚೀಟಿಗಳು ಮೇ ತಿಂಗಳಲ್ಲಿ ಎರಡು ಕೆಜಿಯಂತೆ ಗೋಧಿ ನೀಡಲಾಗುತ್ತಿದ್ದು, ಪ್ರತಿ ಕೆಜಿ ಗೋಧಿಗೆ 8.70 ರೂ.ಗೆ ನೀಡಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries