ಅಗಳಿ: 37 ದಿನಗಳಿಂದ ತಂದೆಗಾಗಿ ಕಾದು ಕುಳಿತಿದ್ದ ಮಗಳ ವಿವಾಹ ಕೊನೆಗೂ ನೆರವೇರಿತು. ಕೊನೆಗೂ ಅರಣ್ಯ ಇಲಾಖೆಯ ಉದ್ಯೋಗಿ, ವಧುವಿನ ತಂದೆ ವಾಚರ್ ರಾಜನ್ ಆಗಮಿಸಲಿಲ್ಲ. ಇದರೊಂದಿಗೆ ಮದುವೆಗೆ ಆಹ್ವಾನಿಸಲು ರಜೆಯ ಮೇಲೆ ತೆರಳಿದ್ದ ರಾಜನ್ ಪುತ್ರಿಯ ವಿವಾಹ ನೆರವೇರಿಸಿಯಾರೆಂಬ ಕೊನೆ ಕ್ಷಣದ ಭರವಸೆಯೂ ಹುಸಿಯಾಯಿತು.
ಸೈಲೆಂಟ್ ವ್ಯಾಲಿಯ ಸೈರಂದ್ರಿ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಅರಣ್ಯ ಇಲಾಖೆಯ ವಾಚರ್ ಉದ್ಯೋಗಿ ರಾಜನ್ ಅವರ ಪುತ್ರಿ ರೇಖಾ ಅವರ ವಿವಾಹ ಶನಿವಾರ ನಡೆದಿದೆ.
ಕಳೆದ ಮೇ 3 ರಂದು ಸೈರಂಧ್ರಿಯ ವಾಚರ್ ಪುಲಿಕಂಚೇರಿ ರಾಜನ್ ನಾಪತ್ತೆಯಾಗಿದ್ದರು. ಸೈರಂಧ್ರಿಯ ಸೈಲೆಂಟ್ ವ್ಯಾಲಿಯ ವಾಚರ್ ರಾಜನ್ ರಾತ್ರಿ ಊಟ ಮಾಡಿ ಹತ್ತಿರದ ಕ್ಯಾಂಪ್ ರೂಮಿಗೆ ತೆರಳಿದ್ದರು. ಅಂದಿನಿಂದ ಯಾರೂ ರಾಜನ್ ಅವರÀನ್ನು ನೋಡಿಲ್ಲ. ಅರಣ್ಯ ಇಲಾಖೆ, ಥಂಡರ್ಬೋಲ್ಟ್, ಪೆÇಲೀಸರು, ಸ್ನೈಪರ್ ಡಾಗ್ ಮತ್ತು ಇತರ ಡ್ರೋನ್ಗಳು ಹಲವು ದಿನಗಳಿಂದ ಹುಡುಕಾಟ ನಡೆಸಿದರೂ ರಾಜನ್ ಪತ್ತೆಯಾಗಲಿಲ್ಲ.
ಪ್ರಸ್ತುತ ರಾಜನ್ ಅವರನ್ನು ನಕ್ಸಲ್ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಒತ್ತಡಕ್ಕಾಗಿ ಅಥವಾ ಕಾಡಿನ ಹಾದಿ ಮತ್ತು ಸುರಕ್ಷತಾ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಭಯೋತ್ಪಾದಕರು ರಾಜನ್ ಅವರನ್ನು ಅಪಹರಿಸಿದ್ದಾರೆ ಎಂಬ ಬಲವಾದ ಶಂಕೆ ಇದೆ.