ಮುನ್ನಾರ್: ಪಂಚಾಯತ್ ಅಧಿಕಾರಿಗಳು ಹಸುಗಳ ಹಿಂಡನ್ನು ವಶಕ್ಕೆ ತೆಗೆದುಕೊಂಡ ಘಟನೆಯೊಂದು ನಡೆದಿದೆ. ಜಿಲ್ಲಾಧಿಕಾರಿಗಳ ವಾಹನ ತಡೆದ ದನಗಳನ್ನು ಪಂಚಾಯಿತಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಈ ಸ್ವಾರಸ್ಯಕರ ಘಟನೆ ಮುನ್ನಾರ್ ನಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಅವರ ವಾಹನಕ್ಕೆ ನಾಲ್ಕು ಜಾನುವಾರುಗಳು ತಡೆಯೊಡ್ಡಿದ್ದ ಕಾರಣ ಕ್ರಮ ಕೈಗೊಳ್ಳಲಾಗಿದೆ!.
ಬಿಡಾಡಿ ದನಗಳು ಮುನ್ನಾರ್ ಪಟ್ಟಣದ ನಿತ್ಯದ ಆಕರ್ಷಣೆಗಳಲ್ಲಿ ಒಂದಾಗಿದೆ. ಆಗಾಗ ವಾಹನಗಳಿಗೆ ಅಡ್ಡಬಂದು ಸಂಚಾರಕ್ಕೆ ಅಡ್ಡಿಪಡಿಸುತ್ತವೆ. ಆದರೆ ಈ ಬಾರಿ ಹಸುಗಳು ತಡೆ ನೀಡಿದ ವ್ಯಕ್ತಿ ಬದಲಾದ್ದು ಗೊಂತಾಗಿಲ್ಲವೋ ಏನೊ?!. ಜಿಲ್ಲಾಧಿಕಾರಿಗಳ ವಾಹನ ತಡೆದ ಕಾರಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುವವರೆಗೆ ವಿಕೋಪಕ್ಕೆ ಹೋದೀತೆಂದು ಪಾಪ ಹಸುಗಳಿಅರಿವಿಗೆ ಬಂದಿರಲಿಕ್ಕಿಲ್ಲ.
ವಾಹನಗಳು ಜೋರಾಗಿ ಹಾರ್ನ್ ಮಾಡಿದಾಗ ಜಿಲ್ಲಾಧಿಕಾರಿ ಸೇರಿದಂತೆ ವಾಹನಗಳಿಗೆ ಅಡ್ಡಿಪಡಿಸುತ್ತಿದ್ದ ಜಾನುವಾರುಗಳು ರಸ್ತೆಯಿಂದ ಹಿಂದೆ ಸರಿದವು. ಜಿಲ್ಲಾಧಿಕಾರಿಗಳ ಅಧಿಕೃತ ಭೇಟಿಗೆ ಅಡ್ಡಿಪಡಿಸಿದ ಬಗ್ಗೆ ಸ್ಥಳೀಯರು ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಈ ಕ್ರಮ ಕೈಗೊಂಡಿದೆ. ಅಡ್ಡಿಪಡಿಸಿದ ಜಾನುವಾರುಗಳನ್ನು ಪತ್ತೆ ಮಾಡಿ ಕಸ್ಟಡಿಗೆ ಪಡೆಯಲಾಗಿದೆ. ಇವುಗಳನ್ನು ಸ್ವಚ್ಛತಾ ಕಾರ್ಮಿಕರು ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಮಾಲೀಕರು ಬಂದು ದಂಡ ಪಾವತಿಸಿದ ನಂತರ ಪಂಚಾಯಿತಿಯವರು ಜಾನುವಾರುಗಳನ್ನು ಬಿಡುಗಡೆ ಮಾಡಿದರು.