HEALTH TIPS

ಖತಾರ್ ಏರ್​​ವೇಸ್​​ ನಿರ್ಬಂಧಿಸಿ ಟ್ವಿಟ್ಟರ್​​ ಅಭಿಯಾನ: ಕಾರಣವೇನು ಗೊತ್ತಾ?

 ನವದೆಹಲಿ: ಟ್ವಿಟ್ಟರ್​​ನಲ್ಲಿ ಖತಾರ್​ ವಿಮಾನ ಏರಬೇಡಿ ಎಂಬ ಅಭಿಯಾನ ಜೋರಾಗಿದೆ. ಭಾರತೀಯರು ಯಾರೂ ಈ ವಿಮಾನ ಹತ್ತಬೇಡಿ ಎಂಬ ಮನವಿ ಮಾಡಲಾಗುತ್ತಿದೆ. ಅರೆ.. ಏನಿದು..? ಈ ಅಭಿಯಾನ ಏಕೆ ಕೈಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.


ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಬಿಜೆಪಿ ಮುಖಂಡರಿಬ್ಬರ ಹೇಳಿಕೆ ಗಲ್ಫ್​​ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಖತಾರ್​​ ಕೈಗೊಂಡ ನಿರ್ಣಯಗಳ ವಿರುದ್ಧ ಈಗ ಭಾರತೀಯರು ಸೇರಿಗೆ ಸವಾ ಸೇರು ಎಂಬಂತೆ ಈ ಅಭಿಯಾನವನ್ನು ಶುರು ಮಾಡಿದ್ದಾರೆ.

ಬಿಜೆಪಿ ಮುಖಂಡರಾದ ನೂಪರ್​ ಶರ್ಮಾ ಮತ್ತು ನವೀನ್​ ಕುಮಾರ್​ ಜಿಂದಾಲ್​ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಖತಾರ್​ ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಟ್ವಿಟಿಗರು ಖತಾರ್​ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಇದಕ್ಕೆ ಪ್ರತಿಯಾಗಿ ಕೆಲ ಟ್ವಿಟ್ಟಿಗರು, ಖತಾರ್​ವಿಮಾನಯಾನವನ್ನು ನಿರ್ಬಂಧಿಸಿ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಇದಕ್ಕೆ ಹಲವರು ಸಾಥ್​ ನೀಡಿದ್ದಾರೆ. ಇನ್ನು ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries