ಕಾಸರಗೋಡು: ಲಯನ್ಸ್ ಕ್ಲಬ್ ಕಾಸರಗೋಡು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು.
ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ವಿನೀಶ್ ವಿದ್ಯಾಧರನ್ ಸಮಾರಂಭ ಉದ್ಘಾಟಿಸಿದರು. ಅಜಿತೇಶ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿ ವೇಣುಗೋಪಾಲ್, ಕೆ ಸುಕುಮಾರನ್ನಾಯರ್, ವಲಯ ಅಧ್ಯಕ್ಷ ಫಾರೂಕ್ ಕಾಜ್ಮಿ ಮತ್ತು ನ್ಯಾಯವಾದಿ ಸುಧೀರ್ ನಂಬಿಯಾರ್ ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲಾ ಅಧ್ಯಕ್ಷರಾಗಿ ಗಂಗಾಧರನ್ ಎನ್ ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕುಂಟಾರ್ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಕೆ ನಾಯರ್ ಅಧಿಕಾರ ಸ್ವೀಕರಿಸಿದರು.
ಕೋಶಾಧಿಕಾರಿ ರಾಜೇಂದ್ರ ಕುಂದರ್ ವಾರ್ಷಿಕ ವರದಿ ಮಂಡಿಸಿದರು. ಡಾ. ಸತ್ಯನಾಥ್ ಸ್ವಾಗತಿಸಿದರು. ರಾಜೇಶ್ ಕೆ ನಾಯರ್ ವಂದಿಸಿದರು.

