HEALTH TIPS

105 ಮಂದಿಯನ್ನು ಬಲಿ ತೆಗೆದುಕೊಂಡ ಪೆರುಮಾನ್ ರೈಲು ಅಪಘಾತಕ್ಕೆ ಇಂದಿಗೆ 34 ವರ್ಷ

                     ಕೊಲ್ಲಂ: ಕೇರಳವನ್ನು ಬೆಚ್ಚಿ ಬೀಳಿಸಿದ್ದ ಪೆರುಮಾನ್ ದುರಂತಕ್ಕೆ ಇಂದಿಗೆ 34 ವರ್ಷ. ಪೆರುಮಾನ್ ದುರಂತವು ಜುಲೈ 8, 1988 ರಂದು ಬೆಂಗಳೂರು-ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್‍ಪ್ರೆಸ್ ಕೊಲ್ಲಂ ಪೆರುಮಾನ್ ಸೇತುವೆಯಿಂದ ಹಳಿತಪ್ಪಿ ಅಷ್ಟಮುಡಿ ಕಯಾಲ್‍ಗೆ ಪಲ್ಟಿಯಾದ ಅಪಘಾತವಾಗಿತ್ತು. ಅಪಘಾತದಲ್ಲಿ 105 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡು ಮೂರು ದಶಕಗಳು ಕಳೆದರೂ ದುರಂತದ ನೆನಪು ಪೆರುಮಾಣಿಗರನ್ನು ಬಿಟ್ಟಿಲ್ಲ.

                  ಇಂದಿಗೆ 34 ವರ್ಷಗಳ ಹಿಂದೆ, ಮುಂಗಾರು ಮಾರುತಕ್ಕೆ ಪೆರುಮಾನ್ ಸೇತುವೆಯಿಂದ ಅಷ್ಟಮುಡಿ ಹಿನ್ನೀರಿಗೆ  ಬೆಂಗಳೂರು-ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್‍ಪ್ರೆಸ್‍ನ ಬೋಗಿಗಳು ಉರುಳಿದ್ದವು. 

               ದುರಂತ ಸಂಭವಿಸಿ 34 ವರ್ಷ ಕಳೆದರೂ ಕೇರಳ ಕಂಡ ಈ ಅತಿ ದೊಡ್ಡ ರೈಲು ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಅಪಘಾತಕ್ಕೆ ಸುಂಟರಗಾಳಿಯೇ ಕಾರಣ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದ್ದು, ಇದು ಈವರೆಗೂ ಕಂಡು ಕೇಳರಿಯದ ಅಧ್ಯಯನವೂ ಹೌದು. 

                   ಪ್ರಾಣವನ್ನೇ ಪಣಕ್ಕಿಟ್ಟು ಸ್ಥಳೀಯರು ಹಾಗೂ ಸ್ವಯಂಸೇವಾ ಸಂಸ್ಥೆಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಪೆರುಮಾನ್ ದುರಂತದಿಂದ ಸಾಕಷ್ಟು ಮಂದಿ ಪಾರಾಗಿದ್ದಾರೆ. ಆ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ರೈಲ್ವೆ ಮತ್ತು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪವಿತ್ತು.

                    ದುರಂತದ ನೆನಪುಗಳನ್ನು ಮರೆತು ಹೊಸ ಸೇತುವೆಯ ಮೂಲಕ ರೈಲುಗಳು ಓಡಿದಾಗ, ಅಧಿಕಾರಿಗಳು ಈ ದುರಂತವನ್ನು ಮರೆತಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries