HEALTH TIPS

ಯುವಕನ ಕಿಡ್ನಿ ಕಸಿಗಾಗಿ ಬಂಗಾರದ ಬಳೆ ಕೊಟ್ಟು ನೆರವಾದ ಮಹೋನ್ನತರಾದ ಉನ್ನತ ಶಿಕ್ಷಣ ಸಚಿವೆ!

                ತ್ರಿಶೂರ್​: ಯುವಕನ ಮೂತ್ರಪಿಂಡ ಕಸಿಗಾಗಿ ಸಚಿವೆ ತಮ್ಮ ಬಂಗಾರದ ಬಳೆಯನ್ನೇ ನೀಡುವ ಮೂಲಕ ನೆರವಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಬಂದಿದ್ದ ಯುವಕನಿಗೆ ಸಚಿವೆ ಈ ರೀತಿ ಸಹಾಯಹಸ್ತ ನೀಡಿದ್ದಾರೆ.

             ತ್ರಿಶೂರ್​ನಲ್ಲಿ ಮೂತ್ರಪಿಂಡ ಕಸಿಗೆ ಸಂಬಂಧಿಸಿದ ವೈದ್ಯಕೀಯ ನೆರವು ಸಮಿತಿಯ ಸಭೆಯಲ್ಲಿ ಸಚಿವೆ ಬಿಂದು ಅವರು ಭಾಗಿಯಾಗಿದ್ದರು. ಈ ವೇಳೆ ಅಲ್ಲೇ ಇದ್ದ 27 ವರ್ಷದ ವಿವೇಕ್​ ಪ್ರಭಾಕರ್ ಎಂಬ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದದ್ದನ್ನು ಕಂಡು ಮರುಗಿದ ಸಚಿವೆ ತಕ್ಷಣವೇ ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಯನ್ನು ತೆಗೆದುಕೊಟ್ಟಿದ್ದಾರೆ.

               ಈ ಯುವಕ ತುರ್ತು ಮೂತ್ರ ಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ಹಣವಿಲ್ಲದೇ ಚಿಕತ್ಸೆ ಪಡೆದುಕೊಂಡಿರಲಿಲ್ಲ. ಚಿಕಿತ್ಸೆಗಾಗಿ ನೆರವಿನ ಹಸ್ತ ಚಾಚಿದ್ದ ಯುವಕನ ಕುಟುಂಬಕ್ಕೆ ಸಚಿವೆ ಮೊದಲ ನೆರವು ನೀಡಿದ್ದಾರೆ. ಸದ್ಯ ಸಚಿವೆಯ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries