HEALTH TIPS

ಮುಖ್ಯಮಂತ್ರಿಗೆ ಕಳಪೆ ಟೀ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ!

           ಭೂಪಾಲ್​: ಮುಖ್ಯಮಂತ್ರಿ ಭೇಟಿ ವೇಳೆ ಕಳಪೆ ಮಟ್ಟದ ಟೀ ನೀಡಿದ್ದರಿಂದ ಕಿರಿಯ ಅಧಿಕಾರಿಯೊಬ್ಬರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

            ಛಾತರ್​ಪುರ್​ ಜಿಲ್ಲೆಯ ಖುಜುರಾಹೋ ಭೇಟಿ ಸಂದರ್ಭದಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಅವರಿಗೆ ಟೀ ನೀಡಲಾಗಿತ್ತು.

                ಈಗ ಇದೇ ಟೀ ಈ ಅಧಿಕಾರಿಗೆ ತಲೆನೋವಾಗಿ ಪರಿಣಮಿಸಿದೆ. ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದ ಟೀ ಅತ್ಯಂತ ಕಳಪೆ ಗುಣಮಟ್ಟದ್ದಾಗಿತ್ತೆಂದು ವರದಿ ನೀಡಲಾಗಿದ್ದು, ಈ ಬೆನ್ನಲ್ಲೇ ಈ ಅಧಿಕಾರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ.

              ಕಿರಿಯ ಅಧಿಕಾರಿ ರಾಕೇಶ್​​ ಕನೌಹ್ಹಾ ಎಂಬುವರು ಮುಖ್ಯಮಂತ್ರಿ ಟೀ ತಾವೇ ನೀಡಿದ್ದರು. ಅಧಿಕಾರಿಯೇ ಟೀ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಲ್ಲದೇ, ಕಳಪೆ ಟೀ ನೀಡಿರುವುದರಿಂದ ನೋಟಿಸ್​ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿಪಿ ದ್ವಿವೇದಿ ಹೇಳಿದ್ದಾರೆ.

                ಕರ್ತವ್ಯದಲ್ಲಿರುವ ವೇಳೆಯೇ ಟೀ ತಂದುಕೊಟ್ಟು ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲದೇ, ಕಳಪೆ ಟೀ ನೀಡಿದ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಮೂರು ದಿನದೊಳಗೆ ಉತ್ತರಿಸಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries