ಮಂಜೇಶ್ವರ: ಶ್ರೀ ವನಶಾಸ್ತಾ ಹಾಗೂ ಪರಿವಾರ ದೈವಕ್ಷೇತ್ರ ನಡುಗುಡ್ಡೆ ಕುಳಬೈಲು ಇದರ ಜೀರ್ಣೋದ್ಧಾರ ಸಮಿತಿಯ ರೂಪೀಕರಣವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯ ಮಾರ್ಗದರ್ಶನದೊಂದಿಗೆ ರೂಪೀಕರಿಸಲಾಯಿತು.
ಕ್ಷೇತ್ರ ನಿರ್ಮಾಣದ ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಅಧ್ಯಕ್ಷರಾಗಿ ರಂಜಿತ್ ಹೊಸಕಟ್ಟೆ ಬೆಜ್ಜ, ಕಾರ್ಯಧ್ಯಕ್ಷರಾಗಿ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀಧರ ರಾವ್ ಆರ್ ಎಂ, ಪ್ರಧಾನ ಕಾರ್ಯದರ್ಶಿಯಾಗಿ ರಾಜಾರಾಮ್, ಕೋಶಾಧಿಕಾರಿಯಾಗಿ ಸುಬ್ಬಣ್ಣ ಆಳ್ವ ಹಾಗೂ ಹಲವು ಪದಾಧಿಕಾರಿಗಳನ್ನು ಆರಿಸಲಾುತು. ಗಣೇಶ್ ನಾವಡ ಹರಿನಾರಾಯಣ ಮಯ್ಯ ವಿಶ್ವನಾಥನ್ ಮಸ್ಕತ್ ಕಾಞಂಗಾಡ್ ಉಪಸ್ಥಿತರಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಭೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಪೂವಪ್ಪ ಮೂಲ್ಯ ಟಿ ಅಧ್ಯಕ್ಷತೆ ವಹಿಸಿದ್ದರು. ನೂತನ ಸಮಿತಿಯ ರೂಪೀಕರಣವನ್ನು ಪುಷ್ಪರಾಜ ಶೆಟ್ಟಿ ವಾಚಿಸಿದರು. ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ, ರಾಮಚಂದ್ರ ಕೆ.ಎಂ ವಂದಿಸಿದರು. ರಾಜಾರಾಮ್ ರಾವ್ ನಿರ್ವಹಿಸಿದರು.