HEALTH TIPS

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕುಂಜಿಲಳ ಪ್ರತಿಭಟನೆ ಕಿಡಿಗೇಡಿತನ ಎಂದು ನಿರ್ದೇಶಕ ರಂಜಿತ್

                  ಎರ್ನಾಕುಳಂ: ಯುವ ನಿರ್ದೇಶಕಿ ಕುಂಜಿಲ ವಿರುದ್ಧ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಹರಿಹಾಯ್ದಿದ್ದಾರೆ. ಕುಂಜಿಲ ಮಾಸಿಲಮಣಿ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಹೊರಗುಳಿದಿರುವ ವಿವಾದದ ಸಂದರ್ಭದಲ್ಲಿ ನಿರ್ದೇಶಕಿ ವಿರುದ್ಧ ರಂಜಿತ್ ಹರಿಹಾಯ್ದರು. ಕುಂಜಿಲ ಬಂಧನದಲ್ಲಿ ಚಲನಚಿತ್ರ ಅಕಾಡೆಮಿಯ ಪಾತ್ರವಿಲ್ಲ ಎಂಬುದು ರಂಜಿತ್ ಅವರು ವಿವರಿಸಿರುವರು. 

               ಒಂದು ಸಣ್ಣ ನಾಟಕದಿಂದ ಮೇಳದ ಶ್ರೇಷ್ಠತೆ ಕಡಿಮೆಯಾಗುವುದಿಲ್ಲ ಎಂದ ರಂಜಿತ್, ಕುಂಜಿಲ ಅವರ ‘ವಿಕೃತಿ’ಯನ್ನೂ ವ್ಯಂಗ್ಯವಾಡಿದರು. ಅಂತರಾಷ್ಟ್ರೀಯ ಮಹಿಳಾ ಚಲನಚಿತ್ರೋತ್ಸವದಲ್ಲಿ ಒಟಿಟಿ ಬಿಡುಗಡೆಯಾದ/ ಆಗುವ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಅಕಾಡೆಮಿ ಹೇಳಿದೆ.

              ಹೀಗಿರುವಾಗ ‘ಸೂರರೈ ಪಾಟರ್’ ಸೇರಿದಂತೆ ಚಿತ್ರಗಳು ಹೇಗೆ ತೆರೆ ಕಾಣಲು ಸಾಧ್ಯ’ ಎಂದು ಕುಂಜಿಲ ಪ್ರಶ್ನಿಸಿದರು. ಇದೇ ವೇಳೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಸ್ವಾಗತಾರ್ಹ. ಕುಂಜಿಲ ಜೊತೆ ಮಾತುಕತೆಗೆ ಸಿದ್ಧ. ಆದರೆ ಈ ಉತ್ಸವದಲ್ಲಿ ನಿಯಮಾವಳಿಗಳನ್ನು ಬದಲಿಸಿ ಚಲನಚಿತ್ರ ಅಕಾಡೆಮಿ ಕಾರ್ಯದರ್ಶಿ ಸಿ ಅಜೋಯ್ ಹೇಳಿರುವರು ವಿಧು ವಿನ್ಸೆಂಟ್ ಅವರ ಪ್ರತಿಭಟನೆಯನ್ನು  ಗೌರವಿಸುವುದಾಗಿ  ಅಜೋಯ್ ಹೇಳಿದರು.

            ಮೊನ್ನೆ ಕುಂಜಿಲ ಮಹಿಳಾ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು.ಪ್ರತಿಭಟನೆ ಮಾಡುತ್ತಿದ್ದ ಕುಂಜಿಲ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಕುಂಜಿಲ ಅವರನ್ನು ಚಿತ್ರೋತ್ಸವಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಗೆಸ್ಟ್ ಪಾಸ್ ಬೇಕು ಎಂಬುದು ಕುಂಜಿಲ ಅವರ ಬೇಡಿಕೆಯಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ಅತಿಥಿಯಾಗಿ ಕೂರಿಸಬೇಕು. ಮಾತನಾಡಲು ಅವಕಾಶವಿರಬೇಕು ಎಂಬುದು ಅವರ ಬೇಡಿಕೆಯಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries