ಕೊಚ್ಚಿ: ಕೆ.ರೈಲು ಯೋಜನೆಗೆ ಮುಂದಾಗುವುದಾಗಿ ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಜನರ ಮೇಲೆ ಕ್ರೌರ್ಯ ಮೆರೆಯಲು ಹವಣಿಸಿದೆ ಎಂದು ಬಿಜೆಪಿ ಹೇಳಿದೆ.
ಕನಿಷ್ಠ ಪಕ್ಷ ಜನರನ್ನು ಅರ್ಥ ಮಾಡಿಕೊಳ್ಳಲು ಸರ್ಕಾರ ಪ್ರಯತ್ನಿಸಬೇಕು. ಕೇರಳದ ಅಭಿವೃದ್ಧಿಗಾಗಿ ಕೆ-ರೈಲು ಅಗತ್ಯ ಎಂದು ಮುಖ್ಯಮಂತ್ರಿ ಹಾಗೂ ಸರಕಾರ ಹೇಳುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಯೋಜನೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವರು. ಯೋಜನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ ಸರ್ಕಾರ ಅಕ್ಷರಶಃ ಜನರನ್ನು ರಸ್ತೆಗಿಳಿಸಿದೆ ಎಂದು ಬಿಜೆಪಿ ಬೊಟ್ಟು ಮಾಡುತ್ತದೆ. . 100 ದಿನ ಕಳೆದರೂ ಕೆ-ರೈಲು ಯೋಜನೆ ಯಾವ ಹಂತಕ್ಕೂ ಬಾರದೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮತ್ತಷ್ಟು ಕಿರುಕುಳ ನೀಡಬಾರದು ಎಂದು ಬಿಜೆಪಿ ನಾಯಕತ್ವ ಹೇಳುತ್ತಿದೆ.
ಇದರಿಂದ ಕೆ-ರೈಲು ಬಂದರೆ ಹಲವು ಕುಟುಂಬಗಳು ನಿರಾಶ್ರಿತವಾಗುತ್ತವೆ. ಸರಕಾರಿ ಅಧಿಕಾರಿಗಳು ಹಲವೆಡೆ ಸರ್ವೆ ಕಲ್ಲು ಇಟ್ಟು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಸಮೀಕ್ಷೆ ಪ್ರಕಾರ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳುವುದರಿಂದ ಜನ ಸಾಮಾನ್ಯರೇ ತೊಂದರೆ ಅನುಭವಿಸುತ್ತಿದ್ದಾರೆ. ಮನೆ ಮಧ್ಯ, ಅಂಗಳ, ತೋಟದಲ್ಲಿ ಹಳದಿ ಬಣ್ಣದ ಸರ್ವೇ ಕಲ್ಲು ಅಳವಡಿಸಿರುವ ಸರ್ಕಾರ ಮತ್ತೆ ಜನರಿಗೆ ತೊಂದರೆ ನೀಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಕೆ-ರೈಲು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿ ಜನಸಾಮಾನ್ಯರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಆಡಳಿತ ಬೆದರಿಸಿದೆ. ಜನರ ಕಣ್ಣೀರು ನೋಡದೆ ಸರಕಾರ ಜಾರಿಗೆ ತಂದಿರುವ ಅಭಿವದ್ಧಿ ಜನರಿಗೆ ಸಂಪೂರ್ಣ ಹಾನಿಕರವಾಗಿದ್ದು, ಕನಿಷ್ಠ ಪಕ್ಷ ಜನರ ಕ್ಷಮೆ ಯಾಚಿಸಲು ಸರಕಾರ ಮುಂದಾಗಬೇಕು. ಯಾವುದೇ ಅಧ್ಯಯನ ನಡೆಸದೆ ಅನುμÁ್ಠನಗೊಳಿಸಲು ಯತ್ನಿಸಿದ ಕೆ-ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಜನರ ಪ್ರಾಣ, ಆಸ್ತಿ ರಕ್ಷಣೆ ಮಾಡಬೇಕಾದ ಸರ್ಕಾರ ಜನರನ್ನು ಹೆದ್ದಾರಿಗೆ ದೂಡುತ್ತಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.
ಕೆ-ರೈಲಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಗೊತ್ತಿದ್ದರೂ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಸರ್ವೆ ಕಲ್ಲು ಹಾಕಿರುವ ಜಮೀನನ್ನು ಮಾರಾಟ ಮಾಡಲಾಗದೆ, ಬೇರೆ ಉದ್ದೇಶಕ್ಕೆ ಬಳಸಲಾಗದೆ ಜನ ತೊಳಲಾಡುತ್ತಿದ್ದಾರೆ. ಕೆ-ರೈಲ್ ಸರ್ವೆ ಕಲ್ಲುಗಳನ್ನು ತೆಗೆದು ಯಥಾಸ್ಥಿತಿಗೆ ತರಬೇಕು ಎಂಬುದು ಜನರ ಸದ್ಯದ ಬೇಡಿಕೆಯಾಗಿದೆ ಎಂದು ಬಿಜೆಪಿ ಗಮನಸೆಳೆದಿದೆ.
ಇನ್ನಾದರೂ ಜನದ್ರೋಹ ಮಾಡಬೇಡಿ: ಕೆ-ರೈಲು ಹೆಸರಲ್ಲಿ ಸರ್ಕಾರ ಕ್ರೌರ್ಯವನ್ನು ಕೊನೆಗೊಳಿಸಬೇಕು: ಬಿಜೆಪಿ
0
July 28, 2022