ತಿರುವನಂತಪುರ: ನನ್ನ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ. ಸಿಪಿಎಂ ಟೀಕೆಗೆ ರಾಜ್ಯಪಾಲರು ಉತ್ತರಿಸಿದರು.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಟೀಕೆ ಮಾಡಬಹುದು ಆದರೆ ನನ್ನ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದರು.
ತಾನು ಶಾಸಕಾಂಗವನ್ನು ಗೌರವಿಸುವೆ. ತನ್ನ ಮುಂದೆ ಬರುವ ಯಾವುದೇ ಕಾಗದಕ್ಕೆ ಸಹಿ ಮಾಡುವುದಾದರೆ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಮಾತ್ರ. ಕಣ್ಣೂರು ವಿಸಿ ವಿರುದ್ಧದ ದೂರಿನ ಬಗ್ಗೆ ಅರ್ಹತೆಯ ಆಧಾರದ ಮೇಲೆ ಮಾತ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ದೃಢಪಡಿಸಿದರು.
ಲೋಕಾಯುಕ್ತ ಕಾಯ್ದೆ ತಿದ್ದುಪಡಿ ವಿಧೇಯಕ ನಾಳೆ ವಿಧಾನಸಭೆಯ ಪರಿಗಣನೆಗೆ ಬರಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಈ ಹೇಳಿಕೆ ಹೊರಬಿದ್ದಿದೆ. ವಿಶ್ವವಿದ್ಯಾನಿಲಯ ನೇಮಕಾತಿ ಮತ್ತು ಸುಗ್ರೀವಾಜ್ಞೆ ವಿಷಯಗಳಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಬಹಿರಂಗ ವಿರೋಧವನ್ನು ವ್ಯಕ್ತಪಡಿಸಿದ್ದರು.
ಯಾರೂ ತನ್ನಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ; ಸಿಪಿಎಂಗೆ ಆರಿಫ್ ಮುಹಮ್ಮದ್ ಖಾನ್ ಪ್ರತ್ಯುತ್ತರ
0
August 29, 2022