HEALTH TIPS

ತೊಡುಪುಳ ಕುಡಯತ್ತೂರಿನಲ್ಲಿ ಭೂಕುಸಿತ; ಒಂದು ಸಾವು; ನಾಲ್ಕು ಮಂದಿಯ ಪತ್ತೆಗೆ ಮುಂದುವರಿದ ಶೋಧ


           ಇಡುಕ್ಕಿ: ತೊಡುಪುಳ ಕುಡಯತ್ತೂರಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಮನೆಯೊಂದು ಸಂಪೂರ್ಣ ನಾಶವಾಗಿದೆ.
           ಚಿಟ್ಟಾಡಿಚಲದಲ್ಲಿ ಸೋಮನ್ ಎಂಬವರ ಮನೆ ಧ್ವಂಸಗೊಂಡಿದೆ. ಸ್ಥಳೀಯರ ಪ್ರಕಾರ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಅಪಘಾತ ಸಂಭವಿಸಿದೆ.
          ಪ್ರಬಲ ಭೂಕುಸಿತದಿಂದ ಸೋಮನ್, ಅವರ ತಾಯಿ ತಂಕಮ್ಮ, ಅವರ ಪತ್ನಿ ಶಿಜಿ, ಮಗಳು ಶಿಮಾ ಮತ್ತು ನಿಮಾ ಅವರ ಮಗ ದೇವಾನಂದ್ ಅವರು ನೆಲದಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತಂಕಮ್ಮ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
             ಪೆÇಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ. ಭೂಕುಸಿತದಿಂದಾಗಿ ದೊಡ್ಡ ಪ್ರಮಾಣದಲ್ಲಿ ಅಪಘಾತ ಉಂಟಾಗಿದೆ. ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಜಾಗದಲ್ಲಿ ಮಣ್ಣು, ಕಲ್ಲು ತುಂಬಿರುವುದರಿಂದ ಜೆಸಿಬಿ ಬರಲು ತುಂಬಾ ಕಷ್ಟವಾಗಿದೆ. ಆಸುಪಾಸಿನಲ್ಲಿ ಬೇರೆ ಮನೆಗಳು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸ್ಥಳದಲ್ಲಿ ಗುಡ್ಡದ ನೀರು ಹರಿದು ಅಪಾರ ಹಾನಿಯಾಗಿದೆ. ನೆಲದಡಿಯಲ್ಲಿ ಹುದುಗಿರುವವರ ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.  



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries