HEALTH TIPS

ಇಂಡಿಗೋ ನಿಷೇಧ; 'ನನ್ನ ನಿಷೇಧ ನಾಳೆ ಕೊನೆಗೊಳ್ಳುವುದಿಲ್ಲ': ಎಂದಿಗೂ ಇಂಡಿಗೋ ಪ್ರವೇಶಿಸುವುದಿಲ್ಲ ಎಂದು ಪುನರುಚ್ಚರಿಸಿದ ಇಪಿ ಜಯರಾಜನ್



                  ತಿರುವನಂತಪುರ: ನಿμÉೀಧಾಜ್ಞೆ ಮುಗಿದರೂ ಇಂಡಿಗೋ ವಿಮಾನ ಹತ್ತುವುದಿಲ್ಲ ಎಂದು ಎಲ್‍ಡಿಎಫ್ ಸಂಚಾಲಕ ಇಪಿ ಜಯರಾಜನ್ ಹೇಳಿದ್ದಾರೆ.
          ಪ್ರಯಾಣ ನಿμÉೀಧ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ನಾನೇ ಬ್ಯಾನ್ ಸಂಚಾರ ನಿಷೇಧಿಸಿದ್ದು, ನಾಳೆ ನನ್ನ ನಿμÉೀಧ ಮುಗಿಯುವುದಿಲ್ಲ ಎಂದು ಎಪಿ ಹೇಳಿದ್ದಾರೆ. ಇಂಡಿಗೋ ಮೇಲಿನ ನಿμÉೀಧವು ಕೊನೆಗೊಳ್ಳುವ ಹಂತದಲ್ಲಿ ಜಯರಾಜನ್ ಅವರ ಪ್ರತಿಕ್ರಿಯೆ ನೀಡಿದ್ದಾರೆ.
                   ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಬಂದಾಗ ಪ್ರತಿಭಟನಾ ಘೋಷಣೆಗಳನ್ನು ಕೂಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಇ.ಪಿ.ಜಯರಾಜನ್ ದೈಹಿಕವಾಗಿ ಹಿಂಸಿದಿದ್ದರು. ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರನ್ನು ನೆಲಕ್ಕೆ ತಳ್ಳಿದ ನಂತರ ಇಂಡಿಗೋ ಕಂಪನಿ ಎಲ್‍ಡಿಎಫ್ ಸಂಚಾಲಕನ ಮೇಲೆ ಪ್ರಯಾಣ ನಿμÉೀಧ ಹೇರಿದೆ. ಕಂಪನಿಯು ಕಾಂಗ್ರೆಸ್ ಕಾರ್ಯಕರ್ತರ ಪ್ರಯಾಣವನ್ನೂ ನಿμÉೀಧಿಸಿತ್ತು.
          ಇಂಡಿಗೋ ಇ.ಪಿ.ಜಯರಾಜನ್‍ಗೆ ಮೂರು ವಾರ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡು ವಾರ ನಿμÉೀಧ ಹೇರಿತ್ತು. ಕಳೆದ ಜೂನ್ 13 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಮಾನದಲ್ಲಿ ಪ್ರತಿಭಟನೆ ನಡೆದಿತ್ತು. ಘಟನೆ ವಿವಾದವಾದ ನಂತರ, ಇಂಡಿಗೋ ಎರಡೂ ಪಕ್ಷಗಳ ವಿರುದ್ಧ ಕ್ರಮ ಕೈಗೊಂಡಿದೆ. ಜಯರಾಜನ್ ಅವರು ಪ್ರಯಾಣಿಸದಂತೆ ನಿಬರ್ಂಧ ಹೇರಿದ ವಿಮಾನಯಾನ ಸಂಸ್ಥೆಯ ವಿರುದ್ಧ ಸಾರ್ವಜನಿಕವಾಗಿ ಹರಿಹಾಯ್ದಿದ್ದರು. ಎಷ್ಟು ದೂರ ಪ್ರಯಾಣಿಸುವುದಾದರೂ ಇಂಡಿಗೋ ವಿಮಾನ ಹತ್ತುವುದಿಲ್ಲ ಎಂದು ಎಲ್‍ಡಿಎಫ್ ಸಂಚಾಲಕರು ಪ್ರತಿಕ್ರಿಯಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries