HEALTH TIPS

ದೇಶ ವಿರೋಧಿ ಹೇಳಿಕೆಗಳು: ಕೆ ಟಿ ಜಲೀಲ್ ವಿರುದ್ಧದ ದೂರಿನ ಕ್ರಮದ ಬಗ್ಗೆ ವರದಿ ಕೇಳಿದ ದೆಹಲಿ ನ್ಯಾಯಾಲಯ


                  ನವದೆಹಲಿ: ಕೆ.ಟಿ.ಜಲೀಲ್ ಅವರು ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ದೂರಿನ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ದಿಲ್ಲಿ ಪೋಲೀಸರಿಗೆ ನ್ಯಾಯಾಲಯ ಪ್ರಶ್ನಿಸಿದೆ.
           ಜಲೀಲ್ ವಿರುದ್ಧದ ದೂರಿನ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸುವಂತೆ ನ್ಯಾಯಾಲಯವು ದೆಹಲಿ ಪೋಲೀಸರಿಗೆ ಕೇಳಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ತಿಲಕ್ ಮಾರ್ಗ್ ಪೋಲೀಸ್ ಠಾಣೆ ಎಸ್‍ಎಚ್‍ಒ ಅವರನ್ನು ವರದಿಯನ್ನು ಕೇಳಿದ್ದಾರೆ.
         ಕೆ.ಟಿ.ಜಲೀಲ್ ವಿರುದ್ಧ ದೇಶದ್ರೋಹ ಸೇರಿದಂತೆ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ವಕೀಲ ಜಿ.ಎಸ್.ಮಣಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜನಪ್ರತಿನಿಧಿ ಜಲೀಲ್ ಅವರು ಆಜಾದ್ ಕಾಶ್ಮೀರ ಉಲ್ಲೇಖ ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಲೀಲ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಏತನ್ಮಧ್ಯೆ, ಸಬ್ ಇನ್ಸ್ ಪೆಕ್ಟರ್ ರಾಹುಲ್ ರವಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ದೆಹಲಿ ಪೋಲೀಸರು ದೂರುದಾರ ಜಿಎಸ್ ಮಣಿ ಅವರಿಗೆ ತಿಳಿಸಿದ್ದಾರೆ.
          ಕೆಟಿ ಜಲೀಲ್ ಫೇಸ್ ಬುಕ್ ಪೋಸ್ಟ್ ಮೂಲಕ ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ. ಪೋಸ್ಟ್‍ನಲ್ಲಿನ ಆಜಾದ್ ಕಾಶ್ಮೀರ್ ಎಂಬ ಪದವು ಹೆಚ್ಚು ವಿವಾದಾತ್ಮಕವಾಗಿತ್ತು. ಇದಾದ ಬಳಿಕ ಬಿಜೆಪಿ ಸೇರಿದಂತೆ ಹಲವು ರಾಜಕೀಯ ಸಂಘಟನೆಗಳು, ಮುಖಂಡರು ಜಲೀಲ್ ವಿರುದ್ಧ ಹರಿಹಾಯ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries