HEALTH TIPS

ಸಿಪಿಎಂ ರಾಜ್ಯ ಸಮಿತಿಯಲ್ಲಿ ಸರ್ಕಾರ-ಸಚಿವರನ್ನು ಟೀಕಿಸಿಲ್ಲ: ಮುಹಮ್ಮದ್ ರಿಯಾಝ್


             ತಿರುವನಂತಪುರ: ಸಿಪಿಎಂ ರಾಜ್ಯ ಸಮಿತಿ ಸಭೆಯಲ್ಲಿ ಸಚಿವರ ವಿರುದ್ಧ ತೀವ್ರ ಟೀಕೆ ನಡೆದಿದೆ ಎಂಬ ಹೇಳಿಕೆಯನ್ನು ಸಚಿವ ಪಿಎ ಮುಹಮ್ಮದ್ ರಿಯಾಝ್ ತಳ್ಳಿ ಹಾಕಿದ್ದಾರೆ.
          ಎಡಪಕ್ಷಗಳ ಆಡಳಿತವನ್ನು ಸುಧಾರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಚಿವರನ್ನು ಟೀಕಿಸಿದ್ದಾರೆ ಎಂದು  ಸುಳ್ಳು ಸುದ್ದಿ ಪ್ರಕಟಿಸಲಾಗುತ್ತಿದೆ ಎಂದೂ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಕೆಲವರು ತಪ್ಪು ಸುದ್ದಿಗಳನ್ನು ಹರಡಿ ಸಂತೋಷಪಡುತ್ತಾರೆ ಎಂದಾದಲ್ಲಿ ರಿಯಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
             ಎರಡನೇ ಪಿಣರಾಯಿ ಸರ್ಕಾರದ ಈವರೆಗಿನ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿದ ರಾಜ್ಯ ಸಮಿತಿ ಸಚಿವರನ್ನು ಟೀಕಿಸಿದೆ. ಆಡಳಿತದಲ್ಲಿನ ಅವ್ಯವಹಾರ ಹಾಗೂ ಪದೇ ಪದೇ ಪೋಲೀಸರ ವೈಫಲ್ಯವೇ ಪ್ರಮುಖ ಸಮಸ್ಯೆ ಎಂದು ಸಭೆ ನಿರ್ಣಯಿಸಿತು. ಮಂತ್ರಿಗಳು ಫೆÇೀನ್ ಮಾಡಿದಾಗ ಫೆÇೀನ್ ಎತ್ತಲಿಲ್ಲ, ಸಮಸ್ಯೆಗಳನ್ನೆಲ್ಲ ಮುಖ್ಯಮಂತ್ರಿಯವರಿಗೆ ಬಿಟ್ಟರು ಎಂಬ ಆರೋಪ ಮಾಡಲಾಗಿದೆ ಎಂದು ಹೇಳಲಾಗಿತ್ತು.
             ಸಚಿವರ ಕೆಲಸವೂ ಅಷ್ಟಕ್ಕμÉ್ಟ ಎಂದು ಮುಖಂಡರು ಗಮನ ಸೆಳೆದರು. ಹಲವು ಸಚಿವರು ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದು, ಎಲ್ಲವನ್ನೂ ಆನ್ ಲೈನ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಮನ್ವಯದ ಕೊರತೆ ಇದೆ ಎಂದು ಗಮನ ಸೆಳೆಯಲಾಗಿದೆ. ಪೋಲೀಸರ ಕ್ರಮದ ವಿರುದ್ಧವೂ ಟೀಕೆ ವ್ಯಕ್ತವಾಗಿತ್ತು. ಆದರೆ ಸಚಿವ ಮೊಹಮ್ಮದ್ ರಿಯಾಝ್ ಇದನ್ನು ನಿರಾಕರಿಸಿದ್ದ ಪಕ್ಷ ಅರ್ಕಾರವನ್ನು ಟೀಕಿಸಿಲ್ಲ. ಅವಲೋಕನ ನಡೆಸಿದೆ ಎಂದು ಹೇಳುವ ಮೂಲಕ ಮರ್ಯಾದೆ ಉಳಿಸಲು ಯತ್ನಿಸಿದಂತಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries