HEALTH TIPS

ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ ಪಡೆಯಲು ನನಗೆ ಸಾಕಷ್ಟು ಅರ್ಹತೆ ಇರಲಿಲ್ಲ!: ಪಂಕಜಾ ಮುಂಢೆ ಅಸಮಾಧಾನ

 

           ಮುಂಬೈ: ಹೊಸದಾಗಿ ವಿಸ್ತರಣೆಗೊಂಡ ಮಹಾರಾಷ್ಟ್ರ ಸಂಪುಟದಲ್ಲಿ ಸ್ಥಾನ ಪಡೆಯಲು ನನಗೆ ಸಾಕಷ್ಟು ಅರ್ಹತೆ ಇರಲಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕಿ ಪಂಕಜಾ ಮುಂಢೆ (Pankaja Munde)ಗುರುವಾರ ಹೇಳಿದ್ದಾರೆ.

             ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde)ಅವರ ಶಿವಸೇನೆ ಬಣ ಹಾಗೂ ಅವರ ಮಿತ್ರ ಪಕ್ಷವಾದ ಬಿಜೆಪಿಯಿಂದ ತಲಾ ಒಂಬತ್ತು ಸಚಿವರು ಈ ವಾರದ ಆರಂಭದಲ್ಲಿ ಸಚಿವ ಸಂಪುಟದ ಮೊದಲ ವಿಸ್ತರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

              ಆದರೆ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲದ ಕಾರಣಕ್ಕೆ ಸಿಎಂ ಶಿಂಧೆಯವರು ಟೀಕೆಗೆ ಗುರಿಯಾಗಿದ್ದರು.

                  ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿಯ ದಿವಂಗತ ಗೋಪಿನಾಥ್ ಮುಂಢೆ ಅವರ ಪುತ್ರಿ ಪಂಕಜಾ, 'ನಾನು ಸೇರ್ಪಡೆಗೊಳ್ಳುವಷ್ಟು ಅರ್ಹತೆ ಹೊಂದಿಲ್ಲದಿರಬಹುದು'' ಎಂದರು.

              ಯಾರಿಗೆ ಅರ್ಹತೆ ಇದೆಯೋ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು. ಅದರ ಬಗ್ಗೆ ನನ್ನ ನಿಲುವು ಇಲ್ಲ. ನನ್ನ ಅಭಿಮಾನವನ್ನು ಉಳಿಸಿಕೊಳ್ಳುವ ಮೂಲಕ ನನ್ನ ರಾಜಕೀಯ ಮಾಡಲು ನಾನು


ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

                ಪಂಕಜಾ ಮುಂಢೆ ಅವರು ದೇವೇಂದ್ರ ಫಡ್ನವೀಸ್ ನೇತೃತ್ವದ ಹಿಂದಿನ ಬಿಜೆಪಿ-ಶಿವಸೇನಾ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries