HEALTH TIPS

'ವರ್ಷದಲ್ಲಿ ಒಂದು ಲಕ್ಷ ಉದ್ಯಮ' ಯೋಜನೆ: ಜಿಲ್ಲೆಯಲ್ಲಿ ಸಾಲ-ಪರವಾನಗಿ-ಸಬ್ಸಿಡಿ ಮೇಳ ಆರಂಭ


             ಪೆರ್ಲ: ಜಿಲ್ಲೆಯಲ್ಲಿ ಉದ್ದಿಮೆ ಆರಂಭಿಸಲು ಬಯಸುವವರು ಸಾಲ ಪರವಾನಗಿ ಸಬ್ಸಿಡಿಗೆ ಸಂಬಂಧಿಸಿದ ಅನುಮಾನಗಳನ್ನು ನಿವಾರಿಸಿಕೊಳ್ಳಲು ಅವಕಾಶವನ್ನು ಸಿದ್ಧಪಡಿಸಲಾಗಿದೆ. ‘ಒಂದು ವರ್ಷದಲ್ಲಿ ಒಂದು ಲಕ್ಷ ಉದ್ದಿಮೆ’ ಯೋಜನೆಯ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರವು ಆಗಸ್ಟ್ 12 ರವರೆಗೆ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಯೋಜಿಸಿರುವ ಸಾಲ-ಪರವಾನಗಿ-ಸಬ್ಸಿಡಿ ಮೇಳವು ಎಣ್ಮಕಜೆ ಗ್ರಾ.ಪಂ. ನಲ್ಲಿ ಆಯೋಜಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ ಉದ್ಘಾಟಿಸಿದರು. ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ 104 ಮಂದಿ ಮೇಳದಲ್ಲಿ ಪಾಲ್ಗೊಂಡಿದ್ದರು. 42 ಮಂದಿ ಉದ್ಯಮ ಆರಂಭಿಸಲು ಸಾಲ ಕೇಳಿದ್ದರು. ಉದ್ದಿಮೆಗೆ ಪರವಾನಿಗೆ ಕೇಳಿಕೊಂಡು ಎಂಟು ಮಂದಿ ಹಾಗೂ ಸಬ್ಸಿಡಿ ಕೇಳಿ 13 ಮಂದಿ ಮೇಳಕ್ಕೆ ಬಂದಿದ್ದರು. ಮೇಳದಲ್ಲಿ ಕೇರಳ ಬ್ಯಾಂಕ್ ನೀಡಿರುವ ಕೈಗಾರಿಕಾ ಸಾಲಗಳ ಅನುಮೋದನೆ ಪತ್ರ ವಿತರಿಸಲಾಯಿತು. ಟಿಕ್ ಟಾಕ್ ಫ್ಯಾಶನ್‍ನಂತಹ ಹೊಸ ಉದ್ಯಮಗಳಿಗೆ 8 ಲಕ್ಷ ರೂ. ಸಾಲ ನೀಡಲಾಗುತ್ತದೆ.
       ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಡಾ.ಫಾತಿಮಾ ಜಹಾನತ್ ಹಂಸಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್‍ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಮಾತನಾಡಿದರು. ಕೈಗಾರಿಕಾ ವಿಭಾಗದ ಮಂಜೇಶ್ವರ ವಿಭಾಗ ಇಂಟರ್ನ್ ಬ್ಲಾಕ್ ಐಇಒ ಎಚ್ ಅಮರ್ ನಾಥ್ ಸ್ವಾಗತಿಸಿ, ರಿತಿಕ್ ರವಿ ವಂದಿಸಿದರು.  ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರು ಹೊಸದಾಗಿ ಆರಂಭಿಸಿರುವ ಉದ್ಯಮಗಳಿಗೆ ಎಲ್ಲಾ ರೀತಿಯ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries