HEALTH TIPS

ಮನಬಂದಂತೆ ಮಾತಾಡಬಾರದು: ರಾಜ್ಯಪಾಲರು ಸ್ಥಾನ ಗೌರವ ಉಳಿಸಿಕೊಳ್ಳಬೇಕು: ಮುಖ್ಯಮಂತ್ರಿ



            ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾನಿಲಯ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರ (ಆರಿಫ್ ಮುಹಮ್ಮದ್ ಖಾನ್) ಹೇಳಿಕೆಗಳು ಅಸಂಬದ್ಧವಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು. ಇದರಲ್ಲಿ ಯಾರೂ ಅμÉ್ಟೂಂದು ಅಸಂಬದ್ಧ ಹೇಳುವಂತಿಲ್ಲ, ರಾಜ್ಯಪಾಲರು ತಾವು ಕುಳಿತಿರುವ ಸ್ಥಾನಕ್ಕೆ ತಕ್ಕಂತೆ ಮಾತನಾಡಲು ಕಲಿಯಬೇಕು. ಮತ್ತು ಮುಖ್ಯಮಂತ್ರಿಗಳು ಮಾತನಾಡಬೇಕು. ಸಿಬ್ಬಂದಿಯ ಸಂಬಂಧಿಯೇ ಅರ್ಜಿ ಸಲ್ಲಿಸುತ್ತಿದ್ದಾರೆಯೇ, ದೋಷವಿದ್ದರೆ ಪರಿಶೀಲಿಸಲಿ ಎಂದು ಮುಖ್ಯಮಂತ್ರಿಗಳನ್ನು ಕೇಳುವೆ  ಎಂದು ರಾಜ್ಯಪಾಲರು ಹೇಳಬೇಕಿತ್ತೆಂದು ಮುಖ್ಯಮಂತ್ರಿ ತಿಳಿಸಿದರು.
           ವಿಶ್ವವಿದ್ಯಾನಿಲಯ ನೇಮಕಾತಿ ವಿಚಾರದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸರ್ಕಾರದ ವಿರುದ್ಧ ನಿಂತಿದ್ದಾರೆ. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆ ತರಲು ಬಿಡುವುದಿಲ್ಲ ಮತ್ತು ರಬ್ಬರ್ ಸ್ಟ್ಯಾಂಪ್ ಆಗಿ ಕಾರ್ಯನಿರ್ವಹಿಸಲು ಸಿದ್ಧರಿಲ್ಲ ಎಂದು ಮೊನ್ನೆ  ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿಯ ಗಮನಕ್ಕೆ ಬಾರದೆ ತಮ್ಮ ಸಿಬ್ಬಂದಿಯ ಸಂಬಂಧಿಯೊಬ್ಬರನ್ನು ಹೇಗೆ ನೇಮಕ ಮಾಡಿಕೊಳ್ಳುತ್ತೀರಿ ಎಂಬ ರಾಜ್ಯಪಾಲರ ಪ್ರಶ್ನೆ ಮುಖ್ಯಮಂತ್ರಿಯನ್ನು ಕೆರಳಿಸಿತು.
          ಮುಖ್ಯಮಂತ್ರಿ ಸಿಬ್ಬಂದಿಯ ಸಂಬಂಧಿ ಎಂಬ ಕಾರಣಕ್ಕೆ ಕೆಲಸಕ್ಕೆ ಅರ್ಜಿ ಹಾಕುವಂತಿಲ್ಲ ಎಂದು ಹೇಳುವ ಅಧಿಕಾರ ಯಾರಿಗೆ ಇದೆ, ಬೆದರಿಕೆಯ ಧಾಟಿ ಯಾರಿಗೆ ಇದೆ ಎಂದು ರಾಜ್ಯ ಗಮನಿಸುತ್ತ್ತಿದೆ ಎಂದರು. ಏನು ಬೇಕಾದರೂ ಕರೆದು ಹೇಳಬಹುದು ಎಂಬ ಅಭಿಪ್ರಾಯವಿದ್ದು, ವಿವಿಗಳಲ್ಲಿ ಪೋಸ್ಟರ್ ಹಾಕುವುದನ್ನೂ ಟೀಕಿಸಲಾಗುತ್ತಿದೆ. ಪೆÇೀಸ್ಟರ್ ಅನ್ನು ರಾಜಭವನಕ್ಕೆ ಕರೆದೊಯ್ಯಬೇಕೇ? ರಾಜ್ಯಪಾಲರಿಗೆ ಏನಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ಕನಿಷ್ಠ ಆಪ್ತರಾದವರಾದರೂ ಪರಿಶೀಲಿಸಲಿ ಎಂದು ಮುಖ್ಯಮಂತ್ರಿ ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries