ಕುಂಬಳೆ: ಶಿರಿಯ ಹೊಳೆಯಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಏಳು ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳನ್ನು ನಾಶಗೊಳಿಸಿದ್ದಾರೆ. ಶಿರಿಯ, ಅರಿಕ್ಕಾಡಿ, ಪಿ.ಕೆ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮರಳುಸಂಗ್ರಹ ಕೇಂದ್ರಕ್ಕೆ ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಶಿರಿಯ ಹೊಳೆ ದಡದ ಮರಳಲ್ಲಿ ಹುದುಗಿಡಲಾಗಿದ್ದ ಮರಳುಸಾಗಾಟದ ಏಳು ದೋಣಿಗಳನ್ನು ಹೊರ ತೆಗೆದು, ಜೆಸಿಬಿ ಸಹಾಯದಿಂದ ಇವುಗಳನ್ನು ನಾಶಗೊಳಿಸಲಾಗಿದೆ. ದಡದಲ್ಲಿ ಸಂಗ್ರಹಿಡಲಾಗಿದ್ದ ಮೂರು ಟನ್ನಿಗೂ ಹೆಚ್ಚು ಮರಳನ್ನು ಮತ್ತೆ ಸಮುದ್ರಕ್ಕೆ ಸುರಿಯಲಾಗಿದೆ. ಅನಧಿಕೃತವಾಗಿ ಮರಳುಸಂಗ್ರಹ ಕೇಂದ್ರ ನಡೆಸುತ್ತಿರುವ ಕಾರ್ಲೆ ನಿವಾಸಿ ರಶೀದ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮರಳುಸಾಗಾಟದ ಟಿಪ್ಪರ್ ಲಾರಿ ವಶಪಡಿಸಿಕೊಂಡಿರುವ ಪೊಲೀಸರು, ಲಾರಿ ಚಾಲಕ ಹುಣಸೂರು ನಿವಾಸಿ ಸದ್ದಾಂಹುಸೈನ್ ಎಂಬಾತನನ್ನು ಬಂಧಿಸಿದ್ದಾರೆ.
ಕುಂಬಳೆ ಆರಿಕ್ಕಾಡಿ ಹೊಳೆಯಲ್ಲಿ ಅನಧಿಕೃತ ಮರಳು ಸಂಗ್ರಹ-ಏಳು ದೋಣಿಗಳ ನಾಶಪಡಿಸಿದ ಪೊಲೀಸರು, ಒಬ್ಬನ ಬಂಧನ
0
September 16, 2022
Tags