HEALTH TIPS

ಹಕ್ಕಿಜ್ವರ ತಡೆಗಟ್ಟುವ ಕ್ರಮಗಳ ಮೊದಲ ಹಂತ: ಆಲಪ್ಪುಳದಲ್ಲಿ ಪ್ರಾರಂಭ: 20,000 ಕ್ಕೂ ಹೆಚ್ಚು ಬಾತುಕೋಳಿಗಳ ಹನನ: ಹೈ ಅಲರ್ಟ್


             ಆಲಪ್ಪುಳ: ಜಿಲ್ಲೆಯಲ್ಲಿ ಹಕ್ಕಿಜ್ವರ ಸೋಂಕಿತ ಬಾತುಕೋಳಿಗಳನ್ನು ಇಂದಿನಿಂದ ಸಾಯಿಸಲಾಗುತ್ತಿದೆ. ಹಕ್ಕಿ ಜ್ವರ ತಡೆಯನ್ನು ಬಲಪಡಿಸುವ ಭಾಗವಾಗಿ ಪೀಡಿತ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲಾಗುವುದು.
         ಹರಿಪಾಡ್ ಪ್ರದೇಶದಲ್ಲಿ 20,471 ಬಾತುಕೋಳಿಗ|ಳನ್ನು ಹನನಗೊಳಿಸಲಾಗಿದೆ.
          ತಡೆಗಟ್ಟುವ ಕ್ರಮಗಳ ಮೊದಲ ಹಂತವು ಇಂದಿನಿಂದ ಪ್ರಾರಂಭವಾಯಿತು.  ಇದಕ್ಕಾಗಿ ಎಂಟು ರಾಪಿಡ್ ರೆಸ್ಪಾನ್ಸ್ ತಂಡಗಳನ್ನು ರಚಿಸಲಾಗಿತ್ತು. 15 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ತಡೆಗಟ್ಟುವ ಅಂಗವಾಗಿ, ಹರಿಪಾಡ್ ಜೊತೆಗೆ ಸುಮಾರು 15 ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷಿಗಳ ಮಾರಾಟ ಮತ್ತು ಸಾಗಾಣಿಕೆಯನ್ನು  ನಿಷೇಧಿಸಲಾಗಿದೆ. ಹಕ್ಕಿಜ್ವರ ಮನುಷ್ಯರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸುವ ಅಂಗವಾಗಿ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದಕ್ಕಾಗಿ ತಹಸೀಲ್ದಾರ್ ನೇತೃತ್ವದಲ್ಲಿ ವಿಶೇಷ ದಳ ರಚಿಸಲಾಗಿದೆ.
         ಹರಿಪಾಡು ನಗರಸಭೆಯ ಒಂಬತ್ತನೇ ವಾರ್ಡ್‍ನ ವಶುಟಾಣಂನ ಪಶ್ಚಿಮ ಮತ್ತು ಉತ್ತರ ಕ್ಷೇತ್ರಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಎಚ್5ಎನ್1 ಇರುವುದು ಪತ್ತೆಯಾಗಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries