ತ್ರಿಶೂರ್; ಕೇರಳ ಕಲಾಮಂಡಲದಲ್ಲೂ ಹಿಂಬಾಗಿಲ ನೇಮಕಾತಿಯ ಬಗ್ಗೆ ದೂರುಗಳು ಕೇಳಿಬಂದಿದೆ. ಶೈಕ್ಷಣಿಕ ಅರ್ಹತೆ ಇಲ್ಲದ ವ್ಯಕ್ತಿಯನ್ನು ಕಲಾಮಂಡಲದಲ್ಲಿ ಡೀನ್ ಆಗಿ ನೇಮಿಸಲಾಗಿದೆ ಎಂಬ ಆರೋಪವೆದ್ದಿದೆ.
ಘಟನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗೂ ಈಗ ಮುಂದಾಗಿವೆ. ಅಕಾಡೆಮಿಕ್ ಡೀನ್ ಆಗಿದ್ದ ಕರಿಯನ್ನೂರು ನಾರಾಯಣನ್ ನಂಬೂದಿರಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ಇದಾದ ಬಳಿಕ ಕಥಕ್ಕಳಿ ವಿಮರ್ಶಕ ರಾಜಾನಂದನ್ ಅವರನ್ನು ಡೀನ್ ಆಗಿ ನೇಮಿಸುವ ನಿರ್ಧಾರ ಹೊಸ ವಿವಾದಕ್ಕೆ ಕಾರಣವಾಗಿದೆ.
ಶೈಕ್ಷಣಿಕ ಅರ್ಹತೆ ಅಥವಾ ಕಲಾತ್ಮಕ ಕೌಶಲ್ಯವಿಲ್ಲದ ವ್ಯಕ್ತಿಯನ್ನು ಡೀನ್ ಮಾಡಬಾರದು ಎಂದು ಶಿಕ್ಷಕರು ಮತ್ತು ನಿಪುಣ ಕಲಾವಿದರು ಸೂಚಿಸಿದ್ದಾರೆ. ರಾಜಾನಂದ್ ಅವರ ಶೈಕ್ಷಣಿಕ ಅರ್ಹತೆಗಳು ಬಿಎ ಪದವಿ ಮತ್ತು ಕೋ-ಆಪರೇಷನ್ ಡಿಪೆÇ್ಲೀಮಾ. ಅವರು ಪ್ರಸ್ತುತ ಕಲಾಮಂಡಲದ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಪಕ್ಷದ ನಾಮನಿರ್ದೇಶನದ ಮೂಲಕ ಆಡಳಿತ ಮಂಡಳಿಯ ಸದಸ್ಯರಾಗಿರುವ ವ್ಯಕ್ತಿ ವಿಶ್ವವಿದ್ಯಾಲಯದ ಶೈಕ್ಷಣಿಕ ಡೀನ್ ಆಗಲು ಒಲವು ತೋರಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಕಲಾ ವಿಶ್ವವಿದ್ಯಾನಿಲಯವಾದ ಕಲಾಮಂಡಲಂನಲ್ಲಿ, ಡೀನ್ ಸಹ ಪ್ರಾಧ್ಯಾಪಕರ ಶ್ರೇಣಿಯವರಾಗಿರಬೇಕು. ಅಥವಾ ಯಾವುದೇ ಕಲಾ ಪ್ರಕಾರದಲ್ಲಿ ಪ್ರಮುಖ ಪ್ರತಿಭೆಯಾಗಿರಬೇಕು. ರಾಜಾನಂದ್ಗೆ ಈ ಎರಡೂ ಅರ್ಹತೆಗಳ ಕೊರತೆಯಿದೆ ಎಂದು ಶಿಕ್ಷಕರು ಹೇಳುತ್ತಾರೆ.
ಆದೇಶವಿದ್ದರೂ ರಾಜಾನಂದನ್ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಕಲಾಂಡಲಂನಲ್ಲಿ ಪಠ್ಯಕ್ರಮವನ್ನು ನಿರ್ಧರಿಸಲು ಡೀನ್ ಜವಾಬ್ದಾರರಾಗಿರುತ್ತಾರೆ. ಪ್ರಮಾಣಿತವಲ್ಲದ ನೇಮಕಾತಿ ಕುರಿತು ಯುಜಿಸಿಗೆ ದೂರು ನೀಡಲು ಶಿಕ್ಷಕರು ಮುಂದಾಗಿದ್ದಾರೆ.
ಕಲಾಮಂಡಲಂನಲ್ಲೂ ಹಿಂಬಾಗಿಲ ನೇಮಕಾತಿ: ಅನರ್ಹ ವ್ಯಕ್ತಿಗೆ ಡೀನ್ ಪಟ್ಟ
0
October 23, 2022
Tags