ತಿರುವನಂತಪುರ: ವಿಝಿಂಜಂ ಬಂದರು ಯೋಜನೆ ವಿರುದ್ಧ ಲ್ಯಾಟಿನ್ ಚರ್ಚ್ ತನ್ನ ಮುಷ್ಕರವನ್ನು ತೀವ್ರಗೊಳಿಸಿದೆ. ತಿರುವನಂತಪುರಂ ನಗರದ ಪಶ್ಚಿಮ ವಲಯವು ಪ್ರತಿಭಟನಾಕಾರರಿಂದ ಸ್ತಬ್ಧಗೊಂಡಿತು.
ಮುಷ್ಕರದಿಂದಾಗಿ ಚಾಕ, ಈಂಚಕಲ್, ಪೂವಾರ್, ತಿರುವಳ್ಳಂ ಮುಂತಾದ ಹತ್ತಕ್ಕೂ ಹೆಚ್ಚು ಕಡೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮುಷ್ಕರದಿಂದಾಗಿ ನಗರದ ಪ್ರಮುಖ ಕೇಂದ್ರಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಲಾ ಬಸ್ಗಳನ್ನೂ ಪ್ರತಿಭಟನಾಕಾರರು ತಡೆದಿದ್ದಾರೆ. ಪ್ರತಿಭಟನಾಕಾರರು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯಾದ ಚಾಕಾ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದರು.
ವಿಝಿಂಜಂ ಜಂಕ್ಷನ್ ಮತ್ತು ಮುಳ್ಳೂರಿನಲ್ಲಿ ಮುಷ್ಕರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಕ್ರಮದಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಗಮನ ಸೆಳೆದಿದ್ದರು. ಈ ಪ್ರದೇಶಗಳಲ್ಲಿ ಘೋಷಣೆಗಳನ್ನು ಸಹ ನಿμÉೀಧಿಸಲಾಗಿತ್ತು.
ಹೋರಾಟದ ಕಾರ್ಯಕ್ರಮಗಳನ್ನು ಮುಂದುವರಿಸುವುದು ಲ್ಯಾಟಿನ್ ಚರ್ಚ್ನ ನಿರ್ಧಾರವಾಗಿದೆ. ಇದರ ಅಂಗವಾಗಿ ನ.19ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಂದು ಸೆಕ್ರೆಟರಿಯೇಟ್ ಎದುರು ಕಲಾ-ಸಂಸ್ಕøತಿ ಸಮಾವೇಶ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ರಸ್ತೆ ಗ್ರಿಡ್ಲಾಕ್, ಸಂಚಾರ ಸ್ಥಗಿತ: ಲ್ಯಾಟಿನ್ ಚರ್ಚ್ನಿಂದ ವಿಝಿಂಜಂ ಬಂದರು ವಿರೋಧಿ ಪ್ರತಿಭಟನೆ ತೀವ್ರ
0
ಅಕ್ಟೋಬರ್ 17, 2022





