ಬದಿಯಡ್ಕ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಕಾಸರಗೋಡು ಜಿಲ್ಲಾಮಟ್ಟದ ಓವರ್ ಆರ್ಮ ಕ್ರಿಕೆಟ್ ಪಂದ್ಯಾಟ ಎರಡು ದಿನಗಳ ಕಾಲ ಬದಿಯಡ್ಕ ಬೋಳುಕಟ್ಟೆ ಮೈದಾನದಲ್ಲಿ ಜರಗಿತು. ಸಮರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಅಧ್ಯಾಪಕರು ಸಮಾಜಕ್ಕೆ 'ರೋಲ್ ಮಾಡೆಲ್ '. ಶಿಕ್ಷಣ ಕ್ಷೇತ್ರದ ಬಿಡುವಿನ ಸಮಯದಲ್ಲಿ ಅಧ್ಯಾಪಕರಲ್ಲಿರುವ ಕ್ರೀಡೆಯ ಆಸಕ್ತಿಯನ್ನು ಬೆಳೆಸಲು ಕೌನ್ಸಿಲ್ ನ ಮೂಲಕ ವಿವಿಧ ಕ್ರೀಡೆಗಳನ್ನು ಹಮ್ಮಿಕೊಂಡಿರುವುದು ಉತ್ತಮ ಕೆಲಸವೆಂದು ಅಭಿಪ್ರಾಯಪಟ್ಟರು. ಈ ಸಂದರ್ಭ ಶಾಸಕರು ಬಹುಮಾನ ವಿತರಿಸಿದರು.
ಸಂಘಟಕ ಸಮಿತಿಯ ಅಧ್ಯಕ್ಷ ಪ್ರಶಾಂತ್ ರೈ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಬೆಳ್ಳೂರು ಶಾಲೆಯ ಅಧ್ಯಾಪಕಿ ಜಲಜಾಕ್ಷಿ ಟೀಚರ್, ಪೈವಳಿಕೆ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ ಬು ಡ್ರಿಯಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೌನ್ಸಿಲ್ ನ ವತಿಯಿಂದ ಬದಿಯಡ್ಕ ಬೊಳುಕಟ್ಟೆ ಮೈದಾನ ಗ್ಯಾಲರಿ ವ್ಯವಸ್ಥೆ, ಹೈ ಮಾಸ್ಟ್ ದೀಪ ಅಳವಡಿಸಲು ಮನವಿ ಸಲ್ಲಿಸಲಾಯಿತು. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಕೌನ್ಸಿಲ್ ಅಧ್ಯಕ್ಷ ಸದಾಶಿವ ಮಾಸ್ತರ್, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ಬೇಳ, ತೀರ್ಪುಗಾರರಾದ ಪ್ರಮೋದ್, ಪುನೀತ್ ಉಪಸ್ಥಿತರಿದ್ದರು. ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ರಘುವೀರ್ ರಾವ್ ವಂದಿಸಿದರು. ಸದಸ್ಯ ಪ್ರಶಾಂತ್ ಮಾಸ್ತರ್ ಕುಂಟಿಕ್ಕಾನ ಕಾರ್ಯಕ್ರಮ ನಿರೂಪಿಸಿದರು. ಮಾಸ್ಟರ್ ಬ್ಯಾಟರ್ಸ್ ಪ್ರಥಮ, ಲಾಡ್ರ್ಸ್ ಇಲೆವೆನ್ ದ್ವಿತೀಯ, ಮಾಸ್ಟರ್ ಸ್ಟ್ರೈಕರ್ ತೃತೀಯ ಬಹುಮಾನವನ್ನು ಗಳಿಸಿತು.