HEALTH TIPS

BREAKING: ಕೇರಳದಲ್ಲಿ ನರಬಲಿ!! ಇಬ್ಬರು ಮಹಿಳೆಯರನ್ನು ಕೊಂದು ಬಲಿ: ಏಜೆಂಟ್ ಶಿಹಾಬ್ ಬಂಧನ


            ಕೊಚ್ಚಿ: ಕೇರಳದಲ್ಲಿ ನರಬಲಿ ನಡೆದಿರುವ ಆಘಾತಕಾರಿ ಅಂಶವೊಂದು ಬಯಲುಗೊಂಡಿದೆ. ಎರ್ನಾಕುಳಂ ಜಿಲ್ಲೆಯ ಇಬ್ಬರು ಮಹಿಳೆಯರನ್ನು ಅಪಹರಿಸಿ ನರಬಲಿ ನಡೆಸಲಾಗಿದೆ.
       ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ನರಬಲಿ ನಡೆಸಿದ ದಂಪತಿ ಹಾಗೂ ಏಜೆಂಟ್ ಶಿಹಾಬ್ ಅಲಿಯಾಸ್ ರಶೀದ್ ನನ್ನು ಬಂಧಿಸಲಾಗಿದೆ.
         ಪೆÇನ್ನೂರುನ್ನಿ ಮೂಲದ ಪದ್ಮಾ ಎಂಬುವರು ಕಡವಂತ್ರದಲ್ಲಿ ಲಾಟರಿ ಮಾರಾಟಗಾರ್ತಿ ನಾಪತ್ತೆಯಾಗಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ನರಬಲಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದೇ ರೀತಿ ಕಾಲಡಿ ಮೂಲದ ಮಹಿಳೆಯೊಬ್ಬರು ಸಹ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಜೆಂಟ್ ಶಿಹಾಬ್ ಅನ್ನು ಕೇಂದ್ರೀಕರಿಸಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದ ವಿವರಗಳನ್ನು ಸಂಜೆಯ ನಂತರ ಬಹಿರಂಗಪಡಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
    ಇತಿ ವೃತ್ತಾಂತ:
           ಮಹಿಳೆಯರ ಕತ್ತು ಸೀಳಿ ಕೊಲೆ ಮಾಡಿ ಹೂತು ಹಾಕಲಾಗಿದೆ ಎಂದು ವರದಿಯಾಗಿದೆ. ಪೆರುಂಬವೂರು ಮೂಲದ ರಶೀದ್ ಏಜೆಂಟ್. ಭಗವಂತ್ ಮತ್ತು ಲೈಲಾ ಬಂಧಿತ ದಂಪತಿ. ಪತ್ತನಂತಿಟ್ಟದ ಆರನ್ಮುಳಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
         ಕಾಲಡಿ ಮೂಲದ ರೋಸಲಿನ್ ಹಾಗೂ ಕಡವಂತ್ರ ನಿವಾಸಿ ಪದ್ಮಾ ಮೃತಪಟ್ಟವರು. ತಿರುವಲ್ಲಾದ ದಂಪತಿಗಳಿಗಾಗಿ ಅವರನ್ನು ಬಲಿಕೊಡಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪದ್ಮಾ ನಾಪತ್ತೆ ಪ್ರಕರಣದ ತನಿಖೆ ವೇಳೆ ಈ ಮಾಹಿತಿ ಹೊರಬಿದ್ದಿದೆ ಎನ್ನುತ್ತಾರೆ ಪೋಲೀಸ್ ಅಧಿಕಾರಿಗಳು.

        ಈಕೆ ಕಡವಂತರ ಪೆÇನ್ನೂರುನ್ನಿ ಪಂಚವಡಿ ಕಾಲೋನಿ ಮೂಲದವಳಾಗಿದ್ದು, ನಾಪತ್ತೆಯಾಗಿರುವ ಪದ್ಮಾ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ಅನ್ಯ ರಾಜ್ಯದ ಯುವತಿ. ಮಹಿಳೆ ನಾಪತ್ತೆ ಪ್ರಕರಣದ ತನಿಖೆ ತಿರುವಲ್ಲಾಗೆ ತಲುಪಿದಾಗ, ಕಾಲಡಿಯಿಂದ ರೋಸಲಿನ್ ಎಂಬ ಮಹಿಳೆಯೂ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿದೆ. ನಂತರ ತನಿಖೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries