HEALTH TIPS

ಬೆಳ್ಳಿತೆರೆಗೆ ಪ್ರವಾಹ ಬರಲಿದೆಯೇ? ಬೃಹತ್ ತಾರಾ ಬಳಗದೊಂದಿಗೆ '2018' ಆಗಮನ; ಕೇರಳ ಅನುಭವಿಸಿದ ಒಂದು ಹಿನ್ನೋಟ


        2018ರಲ್ಲಿ ಕೇರಳವನ್ನು ತಲ್ಲಣಗೊಳಿಸಿದ್ದ ಪ್ರವಾಹ ಸಿನಿಮಾ ಆಗುತ್ತಿದೆ. ಜೂಡ್ ಆಂಟೋನಿ ಜೋಸೆಫ್ ನಿರ್ದೇಶನದ ಈ ಚಿತ್ರ 2018 ರ ಶೀರ್ಷಿಕೆಯೊಂದಿಗೆ ಬೆಳ್ಳಿತೆರೆಗೆ ಬರಲಿದೆ.
          ಇದು ಬರಹಗಾರ ಅಖಿಲ್ ಪಿ ಧರ್ಮಜನ್ ಅವರ ಚೊಚ್ಚಲ ಚಿತ್ರವಾಗಿದೆ. ಅಖಿಲ್ ಚಿತ್ರಕ್ಕೆ ಸಹ ಬರಹಗಾರರಾಗಿದ್ದರೆ, ಜೂಡ್ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.
          ನಟ ಫಹಾದ್ ಫಾಸಿಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಎಲ್ಲರೂ ಹೀರೋ ಎಂಬ ಟ್ಯಾಗ್‍ಲೈನ್‍ನೊಂದಿಗೆ ಪೋಸ್ಟರ್ ಬಿಡುಗಡೆಯಾಗಿದೆ.
           ಪ್ರವಾಹದಿಂದ ಬದುಕುಳಿದ ರಾಜ್ಯದ ಕಥೆ ಹೇಳುವ ಈ ಚಿತ್ರದಲ್ಲಿ ಯುವ ನಟರು ಸೇರಿದಂತೆ ದೊಡ್ಡ ತಾರಾಬಳಗವಿದೆ. ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ಕಲೈ ರಸನ್, ನರೇನ್, ಲಾಲ್, ಇಂದ್ರನ್ಸ್, ಅಜು ವರ್ಗೀಸ್, ತನ್ವಿ ರಾಮ್, ಶಿವದಾ ಮತ್ತು ಗೌತಮಿ ನಾಯರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
          ಅನಾಹುತವನ್ನು ವಿವರಿಸುವ ಹಲವು ಚಿಹ್ನೆಗಳನ್ನು ಸೇರಿಸಿ ಪ್ರವಾಹದ ನೆನಪುಗಳನ್ನು ಸೂಚಿಸುವ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‍ನಲ್ಲಿ ತೆರೆದ ಅಣೆಕಟ್ಟು, ಭಾರೀ ಮಳೆ, ಮುಳುಗಿದ ಗೃಹೋಪಯೋಗಿ ವಸ್ತುಗಳು, ಮೀನುಗಾರರ ರಕ್ಷಣಾ ದೋಣಿ, ಸೇನಾ ಹೆಲಿಕಾಪ್ಟರ್ ಮತ್ತು ಟೆರೇಸ್‍ಗಳ ಮೇಲೆ ನಿಂತಿರುವ ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೃಶ್ಯಗಳಿರಲಿವೆ.
          2018 ಅನ್ನು ಸಿಕೆ ಪದ್ಮಕುಮಾರ್ ಮತ್ತು ಆಂಟೊ ಜೋಸೆಫ್ ಜೊತೆಗೆ ಮಾಮಾಂಗಂ ಮತ್ತು ಮಾಲಿಕಪ್ಪುರಂ ನಿರ್ಮಾಪಕ ವೇಣು ಕುನ್ನಪ್ಪಿಲ್ಲಿ ನಿರ್ಮಿಸಿದ್ದಾರೆ. ಮಿನ್ನಲ್ ಮುರಳಿ ಅವರ ಹಿಂದೆ ಕೆಲಸ ಮಾಡಿದ ವಿಎಫ್‍ಎಕ್ಸ್ ತಂಡವೇ 2018 ಚಿತ್ರದÀಲ್ಲಿ ಇರಲಿದೆ ಎಂದು ನಿರ್ಮಾಪಕ ವೇಣು ಕುನ್ನಪ್ಪಿಳ್ಳಿ ಮಾಹಿತಿ ನೀಡಿದ್ದಾರೆ. ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಕಾವ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries