HEALTH TIPS

ಸಿಪಿಎಂ ನಾಯಕರ ಬಗ್ಗೆ ಸಪ್ನಾ ನೀಡಿರುವ ಹೇಳಿಕೆಗಳನ್ನು ನಂಬಬೇಕು: ಸರಿತಾಳಂತೆ ಸ್ವಪ್ನಾ ಬಾಯಲ್ಲಿ ಅನಿಸಿದ್ದನ್ನು ಹೇಳುವವರಲ್ಲ: ಕೆ.ಸುಧಾಕರನ್


             ತಿರುವನಂತಪುರ: ಸಿಪಿಎಂ ನಾಯಕರ ವಿರುದ್ಧ ಸಾಕ್ಷ್ಯ ಸಮೇತ ಆರೋಪ ಮಾಡಿರುವ ಸ್ವಪ್ನಾ ಸುರೇಶ್ ಅವರನ್ನು ಸಂಶಯದಿಂದ ಕಾಣಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ತಿಳಿಸಿದ್ದಾರೆ. ಸರಿತಾ ಅವರಂತೆ ಬಾಯಿಗೆ ಬಂದಂತೆ ಹೇಳುವವರಲ್ಲ ಸ್ವಪ್ನಾ ಸುರೇಶ್ ಎಂದು ಸುಧಾಕರನ್ ಹೇಳಿದ್ದಾರೆ. ಸ್ವಪ್ನಾ ಬಳಿ ಎಲ್ಲ ಸಾಕ್ಷ್ಯಗಳಿವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
            ಸಿಪಿಎಂ ನೀತಿ ಸ್ವಪ್ನಾಳ ಆರೋಪಗಳ ಎದುರು ಮೌನವಾಗಿದೆ. ಸಿಪಿಎಂಗೆ ನಾಚಿಕೆ, ಘನತೆ ಮತ್ತು ಮೌಲ್ಯಗಳಿಲ್ಲ. ಸಪ್ನಾಗೆ ಮೂವರು ನಾಯಕರ ವರ್ತನೆ ತಿಳಿದಾಗ ನಾಚಿಕೆಯಿಂದ ಅಲ್ಲಿಂದ ತೆರಳಿದರು. ಥಾಮಸ್ ಐಸಾಕ್ ಬಗ್ಗೆ ಗೌರವವನ್ನು ಹೊಂದಿದ್ದರು. ಅವರಿಗೆ ಇದು ಬೇಕಿತ್ತಾ? ಸ್ವಪ್ನಾಳ ಕೋಣೆಯಲ್ಲಿ ಶ್ರೀರಾಮಕೃಷ್ಣನ್ ಕುಡಿದು ಮಲಗಲಿಲ್ಲವೇ? ಭಯದಿಂದಲೇ ಸ್ವಪ್ನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ ಎಂದು ಸುಧಾಕರನ್ ಹೇಳಿದ್ದಾರೆ.
           ಎಲ್ಲರೂ ಸ್ವಪ್ನಾ ಅವರ ಪುಸ್ತಕ ಕೊಂಡು ಓದಬೇಕು. ಮುಖ್ಯಮಂತ್ರಿ ದರೋಡೆಗೆ ತೊಡಗಿಸಿಕೊಂಡಿದ್ದಾರೆ.  ಪಿಣರಾಯಿ ವಿಜಯನ್ ತಮ್ಮ ಪುತ್ರಿ ಮತ್ತು ಕುಟುಂಬದ ಸಲುವಾಗಿ ತಮ್ಮ ಆಡಳಿತವನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಪಿಣರಾಯಿ ಬಾಬಾ ಹಾಗೂ 20 ಮಂದಿ ಕಳ್ಳರ ದರೋಡೆ ನಡೆಯುತ್ತಿದೆ ಎಂದು ಸುಧಾಕರನ್ ಟೀಕಿಸಿದರು. ಪಿಣರಾಯಿ ಆಡಳಿತದಲ್ಲಿ ಕೇರಳ ಮಾಫಿಯಾಗಳ ನಾಡಾಗಿ ಮಾರ್ಪಟ್ಟಿದ್ದು, ಶಾಂತಿಯುತವಾಗಿ ಬದುಕಲು ಕೇರಳದಲ್ಲಿ ಸಾಮಾಜಿಕ ವಾತಾವರಣ ಇಲ್ಲ ಎಂದು ಅವರು ಹೇಳಿರುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries