ಚಂಡಿಗಢ: ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ಸಿಂಗ್(Gurmeet Singh)ಗೆ ನೀಡಲಾದ ಪರೋಲ್ (Parole)ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವೀಕರಿಸಲು ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ನ್ಯಾಯವಾದಿ ಎಚ್.ಸಿ. ಅರೋರಾ(H.C. Aurora) ಅವರು ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.
ಈ ಹಿಂದೆ ಅವರು ಸಿಂಗ್ಗೆ ನೀಡಲಾದ ಪರೋಲ್ ಪ್ರಶ್ನಿಸಿ ಹರ್ಯಾಣ ಸರಕಾರಕ್ಕೆ ಪತ್ರ ಬರೆದಿದ್ದರು. ಗುರ್ಮಿತ್ ಸಿಂಗ್ಗೆ ರಾಜ್ಯ ಸರಕಾರ ನೀಡಿರುವ ಪರೋಲ್ ವಿರುದ್ಧ ದೂರುದಾರರು ಸಲ್ಲಿಸಿದ ಅರ್ಜಿಯ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಉಚ್ಚ ನ್ಯಾಯಾಲಯ ಹರ್ಯಾಣ ಸರಕಾರಕ್ಕೆ ಸೂಚಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರಕಾರದ ಪರ ವಕೀಲ, ಅರ್ಜಿದಾರರ ಅರ್ಜಿಯ ಕುರಿತು ಒಂದು ವಾರದ ಒಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತು. ಅನಂತರ ಅರೋರಾ ಅವರು ತನ್ನ ಅರ್ಜಿಯನ್ನು ಹಿಂಪಡೆದರು.
ನವೆಂಬರ್ 3ರಂದು ನಡೆದ ಆದಂಪುರ ಉಪ ಚುನಾವಣೆ ಹಾಗೂ ನವೆಂಬರ್ 12ರಂದು ನಡೆದ ಹರ್ಯಾಣ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ದೇರಾ ಸಚ್ಚಾ ಸೌದಾದ ವರಿಷ್ಠ ಗುರ್ಮಿತ್ ಸಿಂಗ್ಗೆ ಅಕ್ಟೋಬರ್ನಲ್ಲಿ 40 ದಿನಗಳ ಪರೋಲ್ ನೀಡಲಾಗಿತ್ತು.