ಕಾಸರಗೋಡು: ಕಾಸರಗೋಡು ತಾಲೂಕು ಲೈಬ್ರರಿ ಕೌನ್ಸಿಲ್ ವತಿಯಿಂದ ವಾಚನ ಸ್ಪರ್ಧೆ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಯಿತು. ಕಾಸರಗೋಡು ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಉದ್ಘಾಟಿಸಿದರು. ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಅಬಕಾರಿ ಅಧಿಕಾರಿ ಪಿ.ವಿ.ಕೆ.ಸುರೇಶ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಸಿದರು. ತಾಲೂಕು ಗ್ರಂಥಾಲಯ ಪರಿಷತ್ ಅಧ್ಯಕ್ಷ ಈ.ಜನಾರ್ದನನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಪರಿಷತ್ ಉಪಾಧ್ಯಕ್ಷ ಎ.ಕೆ.ಶಶಿಧರನ್, ಜಿಲ್ಲಾ ಗ್ರಂಥಾಲಯ ಪರಿಷತ್ ಸದಸ್ಯರಾದ ಡಾ.ವಿನೋದ್ ಕುಮಾರ್ ಪೆರುಂಬಳ, ಕೆ.ರವೀಂದ್ರನ್, ಜ್ಯೋತಿ ಟೀಚರ್, ತಾಲೂಕು ಗ್ರಂಥಾಲಯ ಪರಿಷತ್ ಸದಸ್ಯರಾದ ರಾಘವನ್ ವಲಿಯಪರಂಬ, ರಾಜಶೇಖರನ್, ಬಿ.ರಾಧಾಕೃಷ್ಣನ್, ಕೆ.ಶಂಕರನ್, ಮಧು ಪ್ರಶಾಂತ್ ಮಾತನಾಡಿದರು. ಕಾಸರಗೋಡು ತಾಲೂಕು ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಪಿ.ದಾಮೋದರನ್ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಕೆ.ಪ್ರದೀಪ್ ವಂದಿಸಿದರು.
ವಾಚನ ಸ್ಪರ್ಧೆ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ
0
November 20, 2022