ತಿರುವನಂತಪುರ: ಕೊರೊನಾ ಅವಧಿಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಲೇವಡಿ ಮಾಡಿದ್ದಾರೆ.
ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ಒಂದು ಪೀಳಿಗೆ ಡ್ರಗ್ಸ್ನತ್ತ ಮುಖಮಾಡಿದೆ ಎಂದು ಕೆಎಸ್ಆರ್ಟಿಸಿ ಎಂಡಿ ಬಿಜು ಪ್ರಭಾಕರ್ ಟೀಕಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೊರೋನಾ ನಿರ್ಬಂಧಗಳು ಮತ್ತು ಬಸ್ಗಳಲ್ಲಿ ಕುಳಿತು ಪ್ರಯಾಣಿಸಲು ಸರ್ಕಾರ ವಿಧಿಸಿರುವ ನಿಯಮಗಳನ್ನು ಟೀಕಿಸಿದರು. ಲಕ್ಷಗಟ್ಟಲೆ ಜನರು ಸಂಚರಿಸುವ ಸಾರ್ವಜನಿಕ ಸಾರಿಗೆಗೆ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ, ಇಲ್ಲಿ ಮೆಟ್ರೊ ಅನುಷ್ಠಾನಕ್ಕೆ ಮಾತ್ರ ಚರ್ಚೆ ನಡೆಯುತ್ತಿದೆ ಎಂದು ಬಿಜು ಪ್ರಭಾಕರ್ ಆರೋಪಿಸಿದರು. ತಿರುವನಂತಪುರದಲ್ಲಿ ನಡೆದ ಕೆಎಸ್ಟಿಎ ಸಂಘದ 22ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಲಾಕ್ಡೌನ್ನಿಂದ ಏನಾಯಿತು? ಬಸ್ಸಿನಲ್ಲಿ ಕುಳಿತು ಪ್ರಯಾಣಿಸಬಹುದು.. ಆದರೆ ಅಲ್ಲಿಂದ ಪ್ರಯಾಣಿಸಿದರೆ ಕೊರೊನಾ ಬರುತ್ತದೆ. ಪೆÇಲೀಸರು ಮತ್ತು ಮ್ಯಾಜಿಸ್ಟ್ರೇಟ್ಗಳು ಪಕ್ಕದಲ್ಲಿ ಸವಾರಿ ಮಾಡಬಹುದು, ಅವರಿಗೆ ಪರವಾಗಿಲ್ಲ. ಆದರೆ ಸಾರ್ವಜನಿಕರು ಬಸ್ನಲ್ಲಿ ಒಬ್ಬರಿಗೊಬ್ಬರು ಬಳಿ ಕುಳಿತು ಪ್ರಯಾಣಿಸಿದರೆ, ಕೊರೋನಾ ಅಂಟಿಕೊಳ್ಳುತ್ತದೆ. ಬಿವರೇಜ್ ಅಂಗಡಿ ಮುಚ್ಚಲಾಯಿತು. ಏಕೆಂದರೆ ಅದನ್ನು ಖರೀದಿಸಿ ಮನೆಗೆ ಬಂದವರಿಗೆ ಕೊರೋನಾ ಬಾಧಿಸುತ್ತದೆ. ಮತ್ತು ಅವರು ಕೊರೋನಾವನ್ನು ಹರಡುತ್ತಾರೆ. ಆ ಸಂದರ್ಭ ಬಿವರೇಜ್ ಮುಚ್ಚಿದ್ದರಿಂದಲೇ ಅನೇಕ ಜನರು ಮಾದಕ ದ್ರವ್ಯಗಳ ಕಡೆಗೆ ತಿರುಗಿದರು. ಅದನ್ನು ಮುಚ್ಚದಂತೆ ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿತ್ತು. ಗಮನಕ್ಕೆ ತಂದಿದ್ದೆ ಎಂದು ಬಿಜು ಪ್ರಭಾಕರ್ ಪ್ರತಿಕ್ರಿಯಿಸಿದರು.
ಎಲ್ಲರೂ ಯೋಚಿಸುವುದು ಒಂದೇ ಒಂದು ವಿಷಯ. ಮೆಟ್ರೋ, ಮೆಟ್ರೋ, ಮೆಟ್ರೋ.. 20 ಲಕ್ಷ ಜನರನ್ನು ಸಾಗಿಸುವ ಸಾರ್ವಜನಿಕ ಸಾರಿಗೆಗೆ ಯಾವುದೇ ಆಸರೆ ನೀಡುವುದಿಲ್ಲ.. ಮೆಟ್ರೋಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿರುವಾಗ, ಇಷ್ಟು ಪ್ರಯಾಣಿಕರಿಗೆ ಓಡುವ ಕೆಎಸ್ಆರ್ಟಿಸಿಗೆ ಎಷ್ಟು ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಸಾರಿಗೆ ಕಾರ್ಯದರ್ಶಿ ಕೇಳಿದರು.
ಸರ್ಕಾರದ ವಿರುದ್ಧ ಟೀಕೆ ಮಾಡಿದ ಕೆ.ಎಸ್.ಆರ್.ಟಿ.ಸಿ. ಎಂ.ಡಿ ಬಿಜು ಪ್ರಭಾಕರ್
0
November 11, 2022
Tags