HEALTH TIPS

ಶರೋನ್ ಕೊಲೆ ಪ್ರಕರಣ: ಪ್ರಕರಣದ ತನಿಖೆಯಲ್ಲಿ ವಿಫಲತೆ; ಪಾರಶಾಲ ಎಸ್‍ಎಚ್‍ಒ ಹೇಮಂತ್‍ಕುಮಾರ್ ವಿಜಿಲೆನ್ಸ್‍ಗೆ ವರ್ಗಾವಣೆ


            ತಿರುವನಂತಪುರ: ಶರೋನ್ ಕೊಲೆ ಪ್ರಕರಣದ ತನಿಖೆಯಲ್ಲಿ ವೈಫಲ್ಯ  ಆರೋಪ ಹೊತ್ತಿದ್ದ ಪಾರಶಾಲ ಎಸ್‍ಎಚ್‍ಒ ಹೇಮಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
                ಹೇಮಂತಕುಮಾರ್ ಅವರನ್ನು ವಿಜಿಲೆನ್ಸ್‍ಗೆ ವರ್ಗಾವಣೆ ಮಾಡಲಾಗಿದೆ.
                     ಹೇಮಂತ್ ಕುಮಾರ್ ಅವರನ್ನು ಎಸ್‍ಎಚ್‍ಒಗಳ ಸಾಮಾನ್ಯ ವರ್ಗಾವಣೆಯಲ್ಲಿ ಸೇರಿಸಿ ಕ್ರಮ ಕೈಗೊಳ್ಳಲಾಗಿದೆ. ಪಾರಶಾಲ ಪೋಲೀಸರು ಶರೋನ್ ಅವರ ಸಾವನ್ನು ಕ್ಷುಲ್ಲಕವೆಂದು ಪರಿಗಣಿಸಿದ್ದರು ಮತ್ತು  ಸಾವಿನಲ್ಲಿ ಯಾವುದೇ ನಿಗೂಢತೆಯ ಅನುಮಾನವನ್ನು ತಳ್ಳಿಹಾಕಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮದ್ಯದ ಬಾಟಲಿಯನ್ನು ಪತ್ತೆ ಹಚ್ಚಲು ಪೋಲೀಸರು ಪ್ರಯತ್ನಿಸಲಿಲ್ಲ. ಪೋಲೀಸರು ಬಾಲಕಿಯ ಬಗ್ಗೆ ಸಕಾರಾತ್ಮಕ ನಿಲುವು ತಳೆದಿರುವುದು ಮತ್ತು ವಾಟ್ಸ್ಆ್ಯಪ್ ಚಾಟ್‍ಗಳ ಬಗ್ಗೆ ತನಿಖೆ ನಡೆಸದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
           ಇದಲ್ಲದೇ ತನಿಖಾಧಿಕಾರಿಯನ್ನು ಅನುಮಾನಾಸ್ಪದ ಎಂದು ಆರೋಪಿಸಿ ಶರೋನ್ ಕುಟುಂಬ ಹಲವು ಬಾರಿ ಮುಂದೆ ಬಂದಿತ್ತು. ಮೇಲಾಗಿ ಪಾರಶಾಲ ಪೋಲೀಸರು ಆರಂಭಿಕ ತನಿಖೆಯಲ್ಲಿ ವಿಫಲರಾಗಿದ್ದು, ನಂತರದ ಅಪರಾಧ ವಿಭಾಗದ ತನಿಖೆಗೂ ಹಿನ್ನಡೆಯಾಗಿದೆ. ಇದೇ ವೇಳೆ ಪೋಲೀಸರು ಸರಿಯಾಗಿ ಮಧ್ಯಪ್ರವೇಶಿಸಿದರು ಎಂದು ಎಸ್‍ಎಚ್‍ಒ ಹೇಳಿರುವ ಧ್ವನಿಮುದ್ರಿಕೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‍ಎಚ್‍ಒ ಹೇಮಂತಕುಮಾರ್ ಅವರನ್ನು ವಿಜಿಲೆನ್ಸ್‍ಗೆ ವರ್ಗಾವಣೆ ಮಾಡಿ ಕ್ರಮ ಕೈಗೊಳ್ಳಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries