HEALTH TIPS

ಪೋಲೀಸ್ ಬಳಸಿ ನಡೆಸುವ ದೌರ್ಜನ್ಯದಿಂದ ಮೇಯರ್ ಉಳಿಸಲು ಸಾಧ್ಯವಿಲ್ಲ; ಪ್ರಕರಣದಲ್ಲಿ ಅಪರಾಧ ವಿಭಾಗದ ತನಿಖೆ ಒಂದು ಪ್ರಹಸನ: ಕೆ.ಸುರೇಂದ್ರನ್


            ತಿರುವನಂತಪುರ: ಸ್ವಜನಪಕ್ಷಪಾತ ಮತ್ತು ಭ್ರμÁ್ಟಚಾರ ನಡೆಸಿದ ತಿರುವನಂತಪುರಂ ಮೇಯರ್ ಅವರ ಭ್ರಷ್ಟತೆಯನ್ನು ಪೋಲೀಸರ ಅತಿಕ್ರಮಣದಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
           ತಿರುವನಂತಪುರಂ ಕಾರ್ಪೋರೇಷನ್‍ಗೆ ಯುವ ಮೋರ್ಚಾದ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆದರಿಕೆಯಿಂದ ಭ್ರμÁ್ಟಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು.
          ಮೇಯರ್ ರಾಜೀನಾಮೆ ನೀಡುವವರೆಗೂ ಬಿಜೆಪಿ ಧರಣಿ ಮುಂದುವರಿಸಲಿದೆ. ಪತ್ರದ ಕುರಿತು ತನಿಖೆ ನಡೆಸುವಂತೆ ಕೋರಿ ಮೇಯರ್ ಮುಖ್ಯಮಂತ್ರಿಗಳ ಮೊರೆ ಹೋಗಿದ್ದರು. ಚೆಂಡು ಪಿಣರಾಯಿ ವಿಜಯನ್ ಅಂಗಳದಲ್ಲಿದೆ. ಅವರು ಮೇಯರ್ ರಾಜೀನಾಮೆಗೆ ಸಲಹೆ ನೀಡಬೇಕು. ಸಿಪಿಎಂ ಜಿಲ್ಲಾ ಕಾರ್ಯದರ್ಶಿಗೆ ಮೇಯರ್ ಪತ್ರ ಬರೆದ ಪ್ರಕರಣದಲ್ಲಿ ಅಪರಾಧ ವಿಭಾಗದ ತನಿಖೆ ಪ್ರಹಸನವಾಗಿದೆ. ಪಿಣರಾಯಿ ವಿಜಯನ್ ಭ್ರಷ್ಟಾಚಾರದ ರಾಜ. ಅದಕ್ಕಾಗಿಯೇ ಯುವ ಮೇಯರ್ ಕೂಡ ಭ್ರಷ್ಟರಾಗಿರುವುದರಲ್ಲಿ ವಿಶೇಷತೆಯಿಲ್ಲ. ಚಿನ್ನ ಕಳ್ಳಸಾಗಣೆ ಮಾಡಿದಂತಹ ಮುಖ್ಯಮಂತ್ರಿ ಭಾರತದಲ್ಲಿ ಬೇರೆ ಯಾರೂ ಇಲ್ಲ. ಪರಿಶಿಷ್ಟ ಜಾತಿಯವರಿಗೆ ನೀಡುತ್ತಿದ್ದ ಹಣವನ್ನೂ ಹಿಂಪಡೆದ ನಿಗಮ ದೇಶದಲ್ಲಿ ಕೇರಳವೊಂದೆ ಎಂದರು.
         ತಿರುವನಂತಪುರದಲ್ಲಿ ಪ್ರತಿ ಯೋಜನೆಯಲ್ಲಿ ದರೋಡೆ ನಡೆಯುತ್ತಿದೆ. ತಿರುವನಂತಪುರಂ ಸೇರಿದಂತೆ ಎಲ್ಲಾ ನಗರಸಭೆಗಳಲ್ಲಿ ಸಾವಿರಾರು ಹಿಂಬಾಗಿಲ  ನೇಮಕಾತಿಗಳು ನಡೆಯುತ್ತಿವೆ. ಇದರ ವಿರುದ್ಧ ಬಿಜೆಪಿ ಇಡೀ ರಾಜ್ಯದಲ್ಲಿ ಧರಣಿ ನಡೆಸಲಿದೆ ಎಂದು ಕೆ.ಸುರೇಂದ್ರನ್ ಹೇಳಿದರು. ಯಾವುದೇ ಪ್ರತಿಭಟನೆಯ ವಿರುದ್ಧ ಈ ರೀತಿಯ ಹೇಯ ರೀತಿಯಲ್ಲಿ ಪೋಲೀಸರು ಕ್ರಮ ಕೈಗೊಂಡಿರಲಿಲ್ಲ. ಶಾಂತಿಯುತ ಯುವ ಮೋರ್ಚಾ ಮೆರವಣಿಗೆಯ ಮೇಲೆ ಪೋಲೀಸರು ಹೈ ಪವರ್ ಗ್ರೆನೇಡ್‍ಗಳನ್ನು ಹಾರಿಸಿದರು.

                 ಅಶ್ರುವಾಯು ಬಳಕೆಯಿಂದ ಮಾಧ್ಯಮದ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಪೋಲೀಸರ ದೌರ್ಜನ್ಯದ ಮುಂದೆ ಬಿಜೆಪಿ ಮಂಡಿಯೂರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಹೇಳಿದರು. ಯುವಮೋರ್ಚಾ ರಾಜ್ಯಾಧ್ಯಕ್ಷ ಸಿ.ಆರ್.ಪ್ರಪುಲ್ಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಸಿ.ಶಿವನಕುಟ್ಟಿ, ಪಿ.ರಘುನಾಥ್, ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್, ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಅಜೇಶ್, ಜಿಲ್ಲಾಧ್ಯಕ್ಷ ಆರ್.ಸಜಿತ್ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries