HEALTH TIPS

ಬಸ್ ಸಂಚಾರ ಮೊಟಕು-ಪ್ರತಿಭಟನೆ


            ಬದಿಯಡ್ಕ:  ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಬಸ್ಸುಗಳು ಬದಲಿ ದಾರಿಯಲ್ಲಿ ಸಂಚರಿಸುತ್ತಿರುವುದನ್ನು ಪ್ರತಿಭಟಿಸಿ ಮಾನ್ಯ ಪರಿಸರದ ನಾಗರಿಕರು ಕೊಲ್ಲಂಗಾನದಲ್ಲಿ  ನಿನ್ನೆ ಬಸ್ಸುಗಳಿಗೆ ತಡೆಯೊಡ್ಡಿ ಪ್ರತಿಭಟಿಸಿದರು.
         ಜಿಲ್ಲಾ ಪಂಚಾಯತು ಸದಸ್ಯೆ ಶೈಲಜಾ ಭಟ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ  ಫೆÇ್ತ.ಶ್ರೀನಾಥ್ ಕೊಲ್ಲಂಗಾನ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತು ಸದಸ್ಯೆ ಅಶ್ವಿನಿ ಭಟ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ಯಾಮ ಪ್ರಸಾದ್ ಮಾನ್ಯ,   ಅನಸೂಯ, ವಿವಿದ ರಾಜಕೀಯ ಪ್ರತಿನಿಧಿಗಳಾದ ರಾಧಾಕೃಷ್ಣ ರೈ, ಅಹಮ್ಮದ್ ಮಾನ್ಯ, ಜೋಸೆಫ್ ಕ್ರಾಸ್ತ,  ಮಧುಚಂದ್ರ ಮಾನ್ಯ, ಎ.ಎಸ್.ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಮಹೇಶ್ ವಳಕುಂಜ ಸ್ವಾಗತಿಸಿದರು. ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಮಾನ್ಯ ರಸ್ತೆಯಾಗಿ ಬರುವ ಬಸ್ಸುಗಳು ಬೇರೆ ದಾರಿ ಮೂಲಕ ಸಾಗುತ್ತಿದ್ದು ಇದು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಸಂಕಷ್ಟ ಉಂಟು ಮಾಡಿತ್ತು. ಈ ಬಗ್ಗೆ ಸ್ಥಳೀಯರು ಬಸ್ಸು ಮಾಲಕ ಸಂಘ, ಸಾರಿಗೆ ಅಧಿಕಾರಿಗಳು ಎಂಬಿವರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಉಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಸ್ಸುಗಳಿಗೆ ತಡೆಯೊಡ್ಡಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries