HEALTH TIPS

ಸರ್ಕಾರದ ವಿರುದ್ಧವೇ ಟೀಕೆ: ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸಲು ಸಿಪಿಎಂ ಚಿಂತನೆ


             ತಿರುವನಂತಪುರ: ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳನ್ನು ನಿಯಂತ್ರಿಸಲು ಸಿಪಿಎಂ ಮುಂದಾಗಿದೆ. ಕೆ.ಎಸ್.ಆರ್.ಟಿ.ಸಿ ಮತ್ತು ಕೆ.ಎಸ್.ಇ.ಬಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಸಿ.ಐ.ಟಿ.ಯು ನಡೆಸುವ ಮುಷ್ಕರಗಳು ಸಿಪಿಎಂ ಮತ್ತು ರಾಜ್ಯ ಸರ್ಕಾರಕ್ಕೆ ಕಳಂಕ ತರುತ್ತಿವೆ. ಇದರ ಬೆನ್ನಲ್ಲೇ ಸರ್ಕಾರ ಹೊಸ ಉಪಕ್ರಮದತ್ತ ಮುಂದಾಗುತ್ತಿದೆ.
        ಕೈಗಾರಿಕಾ ಪರಿಸರವನ್ನು ಸುಧಾರಿಸುವ ಭಾಗವಾಗಿ, ಕಾರ್ಮಿಕ ಸಂಘಗಳಲ್ಲಿನ ತಪ್ಪು ಪ್ರವೃತ್ತಿಯನ್ನು ನಿಯಂತ್ರಿಸಲು ಟ್ರೇಡ್ ಯೂನಿಯನ್ ಕಾಯ್ದೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. 4ರಂದು ಆರಂಭವಾಗಲಿರುವ ಸಿಪಿಎಂ ರಾಜ್ಯ ಪಾಲಿಟ್ ಬ್ಯೂರೊ  ಹಾಗೂ ರಾಜ್ಯ ಸಮಿತಿ ಸಭೆಗಳಲ್ಲಿ ಈ ಸಂಬಂಧ ಚರ್ಚೆಗಳು ನಡೆಯಲಿವೆ.
          ಸಿಐಟಿಯು ಮುಖಂಡರು ಹಲವು ವಿಷಯಗಳಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಕೆರಳಿಸಿದ್ದಾರೆ. ನೋಕ್ಕುಕೂಲಿ ಸಂಸ್ಕøತಿ ವಿರುದ್ಧ ಕಟ್ಟುನಿಟ್ಟಿನ ನಿಲುವು ತಳೆಯಲು ಸಿಪಿಎಂ ರಾಜ್ಯ ಸಮಿತಿ ಈ ಹಿಂದೆ ನಿರ್ಧರಿಸಿತ್ತು. ಹಿಂದಿನ ಚೌಕಾಶಿ ಶೈಲಿ ಈಗ ಸಾಧ್ಯವಿಲ್ಲ. ಉದ್ಯಮ ಸ್ನೇಹಿ ವಾತಾವರಣವನ್ನು ಸುಧಾರಿಸುವುದು ಕಾರ್ಮಿಕರ ಕರ್ತವ್ಯ ಎಂದು ಕಾರ್ಮಿಕ ಸಂಘಟನೆಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries