ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನೇತ್ರತ್ವದಲ್ಲಿ ಮೂಢನಂಬಿಕೆಗಳು, ಅನಾಚಾರಗಳಿಗೆದುರಾಗಿ ಜನಚೇತನ ಜಾಥಾ ಕಾರ್ಯಕ್ರಮ ಡಿ. 22 ರಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ನಡೆಯಲಿದೆ. ಸಮಾರಂಭದ ಅಂಗವಾಗಿ ಜಾಥಾ-ಉದ್ಘಾಟನಾ ಕಾರ್ಯಕ್ರಮಗಳ ಯಶಸ್ವಿಗೆ ಸ್ವಾಗತ ಸಂಘ ರೂಪೀಕರಣ ಸಭೆ ತುಳು ಅಕಾಡಮಿ ಸಭಾಂಗಣದಲ್ಲಿ ನಡೆಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷÀ ಕೆ.ವಿ. ಕುಂಞ ರಾಮನ್ ವಿಷಯ ಮಂಡಿಸಿದರು. ಜಾಥಾ ಯಶಸ್ವಿ ಗಾಗಿ ಸಮಿತಿ ರೂಪೀಕರಿಸಲಾಯಿತು. ರಕ್ಷಾಧಿಕಾರಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಬ್ಲಾಕ್ ಪಂಚಾಯತಿ ಅಧ್ಯಕ್ಷರು, ಪಂಚಾಯತಿ ಅಧ್ಯಕ್ಷರನ್ನು ಆಯ್ಕೆಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆ.ಆರ್. ಜಯಾನಂದ, ಉಪಾಧ್ಯಕ್ಷರಾಗಿ ಡಾ.ಪಿ ಯಂ. ಸಲೀಂ, ದಿನೇಶ್ ವಿ, ಅಹ್ಮದ್ ಹುಸೈನ್ ಪಿ.ಕೆ, ಅಬ್ದುಲ್ಲಾ ಕೆ, ಕರುಣಾಕರ ಶೆಟ್ಟಿ, ಗಂಗಾಧರ, ಜಮೀಲಾ ಸಿದ್ದಿಕ್, ಕಾರ್ಯಕ್ರಮ ಸಂಚಾಲಕರಾಗಿ ಕಮಲಾಕ್ಷ ಡಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ದಿನೇಶ್ ವಿ, ಸಂಚಾಲಕರಾಗಿ ಸನಿಲ್, ಅಲಂಕಾರ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ, ಸಂಚಾಲಕರಾಗಿ ಅಬ್ದುಲ್ಲಾ ಕೆ ಹಾಗು ವಿವಿಧ ಸಂಘಟನಾ ಸಮಿತಿ ರೂಪೀಕರಿಸಲಾಯಿತು. ವರ್ಕಾಡಿ ಪಂಚಾಯತ್ ಅಧ್ಯಕ್ಷ ಭಾರತೀ ಯಸ್ ಮಾತನಾಡಿದರು.
ಕೇರಳ ವಿಧಾನ ಸಭಾ ಸ್ಪೀಕರ್ ಎ.ಯನ್ ಶಂಶೀರ್ ಉದ್ಘಾಟನೆ ಮಾಡಲಿರುವ ಜಾಥಾದಲ್ಲಿ ಕನ್ನಡ ನಾಟಕ ರಂಗದಲ್ಲಿ ಪ್ರಸಿದ್ಧರಾದ ಬಸವಲಿಂಗಯ್ಯ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಕೆ.ವಿ.ಕುಂಞ ಕೃಷ್ಣನ್ ಜಾಥಾ ಕ್ಕೆ ನೇತ್ರತ್ವ ನೀಡಲಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ ಕಮಲಾಕ್ಷ ಸ್ವಾಗತಿಸಿ, ಅಧ್ಯಕ್ಷರು ಅಬ್ದುಲ್ಲಾ.ಕೆ ವಂದಿಸಿದರು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ನೇತ್ರತ್ವದಲ್ಲಿ ಮೂಢನಂಬಿಕೆಗಳು, ಅನಾಚಾರಗಳಿಗೆದುರಾಗಿ ಜನ ಚೇತನ ಜಾಥಾ ಕಾರ್ಯಕ್ರಮ: ಸ್ವಾಗತ ಸಂಘ ರಚನೆ
0
December 08, 2022
Tags