HEALTH TIPS

ನಾಳೆಯಿಂದ ಪಾವೂರು ತಚ್ಚಿರೆಪದವು ಶ್ರೀ ವಾಸುಕೀ ನಾಗರಜ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ




         ಕಾಸರಗೋಡು: ಮಂಜೇಶ್ವರ ಪಾವೂರು ತಚ್ಚಿರೆಪದವು ಶ್ರೀ ವಾಸುಕೀ ನಾಗರಜ ರಕ್ತೇಶ್ವರೀ ಪರಿವಾರ ದೈವಗಳ ಸನ್ನಿಧಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಡಿ. 24 ಹಾಗೂ 25ರಂದು ಜರುಗಲಿದೆ. ತಂತ್ರಿ ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಜೇಶ್ ತಾಳಿತ್ತಾಯ ಅವರ ನೇತೃತ್ವದಲ್ಲಿ ಕಾಯಾಕ್ರಮ ಜರುಗಲಿದೆ.
      24ರಂದು ಬೆಳಗ್ಗೆ ತಂತ್ರಿರ್ಯರಿಗೆ, ವೈದಿಕರಿಗೆ ಸ್ವಾಗತ, ಸಾನೂಹಿಕ ಪ್ರಾರ್ಥನೆ, ಉಗ್ರಾನ ಮುಹೂರ್ತ, ಮಧ್ಯಾಹ್ನ 1ಗಂಟೆಗೆ ವರ್ಕಾಡಿ ಕವಿ ಶ್ರೀ ಸುಬ್ರಹ್ಮಣ್ಯ ದೇವಸ್ತನದಿಂದ ಕ್ಷೇತ್ರಕ್ಕೆ  ಹಸಿರುವಾಣಿ ಹೊರೆಕಾಣಿಗೆ ಮೆರವಣಿಗೆ ಅಗಮಿಸಲಿದೆ. ಸಂಜೆ 5.30ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 9.30ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ  ಯಕ್ಷಗಾನ ತಾಳಮದ್ದಳೆ ನಡೆಯುವುದು. 25ರಂದು ಬೆಳಗ್ಗೆ 7ರಿಂದ ಗಣಹೋಮ, ಪವಮಾನ ಹೋಮ, ಬ್ರಹ್ಮಕಲಶ ಪೂಜೆ, 11.11ರ ಮುಹೂರ್ತದಲ್ಲಿ ಶ್ರೀ ವಾಸುಕೀ ನಾಗರಜ ರಕ್ತೇಶ್ವರೀ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯುವುದು. ಮಧ್ಯಾಹ್ನ 12ಕ್ಕೆ ಅಶ್ಲೇಷ ಬಲಿ, 2ರಿಂದ ಭಜನೆ,  ಸಂಜೆ 4ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 6ಕ್ಕೆ ರಂಗಪೂಜೆ, ರತ್ರಿ 8.30ಕ್ಕೆ ಧಾರ್ಮಿಕ ಸಭೆ ನಡೆಯುವುದು. ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ 10ರಿಂದ ವಿಠಲ ನಾಯ್ಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಹಿತ್ಯ ಸಂಭ್ರಮ ನಡೆಯುವುದು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries