HEALTH TIPS

ಜಲಜೀವನ್ ಮಿಷನ್ ನಿಂದ ಜಾಗೃತಿ ಜಾಥಾ


             ಬದಿಯಡ್ಕ: ಪ್ರತಿಯೊಂದು ಮನೆಗೂ ಗ್ರಾಮೀಣ ಶುದ್ಧಜಲ ಒದಗಿಸುವ ಸಲುವಾಗಿ ಜಲಜೀವನ್ ಮಿಷನ್ ಬದಿಯಡ್ಕ ಗ್ರಾಮ ಪಂಚಾಯತಿ ಮತ್ತು ಶ್ರೀಸತ್ಯಸಾಯಿ ಓರ್ಪನೇಜ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬೇಳ ಸಂತ ಬಾರ್ತಲೋಮಿಯ ಶಾಲೆಯಲ್ಲಿ ಮಂಗಳವಾರ ಸಂದೇಶ ಜಾಥಾ ನಡೆಸಲಾಯಿತು.
            ಜನರಲ್ಲಿ ಜಲಸಂರಕ್ಷಣೆ ಅರಿವು ಮೂಡಿಸಲು ಜಾಥಾ ನಡೆಸಲಾಯಿತು. ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ 70 ಮಂದಿ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕರು ಜಾಥಾಕ್ಕೆ ಸಾಥ್ ನೀಡಿದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿ ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಕುಮಾರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂ. ಸದಸ್ಯೆ ಜಯಂತಿ ವಿ ಹಾಗೂ ಗ್ರಾ.ಪಂ.ಸದಸ್ಯ ಶಂಕರ್ ಡಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಲಜೀವನ್ ಮಿಷನ್ ಬಗ್ಗೆ ಯೋಜನೆಯ ಬದಿಯಡ್ಕ ಗ್ರಾಮ ಪಂಚಾಯತಿ ಯೋಜನಾಧಿಕಾರಿ ವಿಜಿತ್ ಕುಮಾರ್ ಕೆ ಮಾತನಾಡಿದರು. ಶಾಲಾ ಪ್ರಬಂಧಕಿ ಸಿಸ್ಟರ್ ಮರ್ಸೆಲೆನ್ ಬ್ರೆಗ್ಸ್ ಶುಭಹಾರೈಸಿದರು. ಮೋಹನ್ ದಾಸ್, ಮೋಹನ್ ಸಿ.ಎಚ್. ಉಪಸ್ಥಿತರಿದ್ದರು. ಶಿಕ್ಷಕಿ ಅಶ್ವಿನಿ ಡಿ.ಸೋಜ ಸ್ವಾಗತಿಸಿ, ಕ್ರಿಸ್ಟಿಲಿನ ಪೆರ್ನಾಂಡೀಸ್ ವಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries