HEALTH TIPS

ಸ್ವಯಂವರದ 50 ನೇ ವಾರ್ಷಿಕೋತ್ಸವ; 'ಆಸಕ್ತರು ಪಾವತಿಸಿ'; ವಿವಾದಾತ್ಮಕ ಆದೇಶದ ಬಳಿಕ ಸಮಜಾಯಿಷಿ ನೀಡಿದ ಸಚಿವರು


              ತಿರುವನಂತಪುರಂ: ಅಡೂರ್ ಗೋಪಾಲಕೃಷ್ಣನ್ ಅವರ ಸ್ವಯಂವರಂ ಸಿನಿಮಾದ 50ನೇ ವμರ್Áಚರಣೆಗೆ ಸ್ಥಳೀಯ ಸಂಸ್ಥೆಗಳು ಹಣ ನೀಡಬೇಕು ಎಂಬ ಆದೇಶಕ್ಕೆ ಸಚಿವ ಎಂ.ಬಿ.ರಾಜೇಶ್ ಪ್ರತಿಕ್ರಿಯಿಸಿದ್ದಾರೆ.
            ಅಡೂರ್ ಗೋಪಾಲಕೃಷ್ಣನ್ ಅವರು ವಿಶ್ವವಿಖ್ಯಾತ ಚಲನಚಿತ್ರ ನಿರ್ಮಾಪಕರಾಗಿದ್ದು, ಆಸಕ್ತರು ಕಾರ್ಯಕ್ರಮ ಆಯೋಜಿಸಲು ದೇಣಿಗೆ ನೀಡಬೇಕು ಎಂದು ಸಚಿವರು ಹೇಳಿದರು. ನಿರ್ಧಾರವನ್ನು ಹೇರಿಲ್ಲ ಮತ್ತು ವಿವಾದದ ಸಮಸ್ಯೆ ಇಲ್ಲ ಎಂದು ಸ್ಥಳೀಯಾಡಳಿತ ಸಚಿವರು ಹೇಳಿದ್ದಾರೆ.
             ಸ್ವಯಂವರದ 50 ನೇ ವಾರ್ಷಿಕೋತ್ಸವವನ್ನು ಆಚರಿಸಲು ಪತ್ತನಂತಿಟ್ಟ ಜಿಲ್ಲೆಯ ಪಂಚಾಯತ್‍ಗಳು ತಲಾ 5000 ರೂಪಾಯಿಗಳನ್ನು ಪಾವತಿಸಲು ಸರ್ಕಾರ ಆದೇಶಿಸಿತ್ತು. ಈ ಮೊತ್ತವನ್ನು ಜಿಲ್ಲೆಯ ಎಲ್ಲ 53 ಪಂಚಾಯಿತಿಗಳಿಗೂ ನೀಡುವಂತೆ ಕಾರ್ಯಕ್ರಮದ ಆಯೋಜನಾ ಸಮಿತಿಗೆ ಸ್ಥಳೀಯಾಡಳಿತ  ಇಲಾಖೆ ಸೂಚಿಸಿತ್ತು. ಇದು ವಿವಾದವಾದ ಬೆನ್ನಲ್ಲೇ ಸಚಿವರು ಸಮಜಾಯಿಷಿ ನೀಡಿದ್ದಾರೆ.
           ಸ್ವಯಂವರದ 50ನೇ ವμರ್Áಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿತ್ತು. ಪ್ರಮುಖರನ್ನೊಳಗೊಂಡ ಸಂಘಟನಾ ಸಮಿತಿಯನ್ನೂ ರಚಿಸಲಾಯಿತು. ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ಮೊದಲ ಚಿತ್ರ ಸ್ವಯಂವರಂ. ನವೆಂಬರ್ 1972 ರಲ್ಲಿ ಬಿಡುಗಡೆಯಾದ ಚಿತ್ರದ ವಾರ್ಷಿಕ ಸಂಭ್ರಮಾಚರಣೆಯು ವಿವಿಧ ಸ್ಥಳಗಳಲ್ಲಿ ನಡೆದಿದೆ.  ಆದರೆ ಮತ್ತೆ ಸರ್ಕಾರ ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ.
          ಆದರೆ ಅಡೂರ್ ಗೋಪಾಲಕೃಷ್ಣನ್ ಅವರು ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ.  ಚಿತ್ರಕ್ಕಾಗಿ ಯಾರಿಂದಲೂ ಹಣ ವಸೂಲಿ ಮಾಡಬಾರದು ಹಾಗೂ ಆ ರೀತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅಡೂರ್ ಸಂಘಟನಾ ಸಮಿತಿಗೆ ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries