ತಿರುವನಂತಪುರಂ: ರಾಜ್ಯ ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ಗೆ ರಾಜ್ಯ ಸರ್ಕಾರ ಬಾಕಿ ವೇತನ ಮಂಜೂರು ಮಾಡಿದೆ.
ಎಂಟೂವರೆ (8.50) ಲಕ್ಷಗಳನ್ನು 17 ತಿಂಗಳ ಬಾಕಿಯಾಗಿ ಮಂಜೂರು ಮಾಡಲಾಗಿದೆ. ಚಿಂತಾ ಅವರೇ ಬಾಕಿ ಪಾವತಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಜೆರೋಮ್ ಅವರು ಉಳಿದ ಮೊತ್ತ ತಾನಾಗಿ ಕೇಳಿರಲಿಲ್ಲ ಎಂದು ವಾದಿಸಿದ್ದರು. ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಚಿಂತಾ ಅವರು ಹೆಚ್ಚಿನ ವೇತನ ಬಾಕಿ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಕೇಳಲಿಲ್ಲ ಎಂಬುದು ಚಿಂತಾ ಅವರ ವಾದ ಈ ಮೂಲಕ ಬಯಲಾಗಿದೆ.
ಜೆರೋಮ್ ಅವರ ವಾದ ಸುಳ್ಳೆಂದು ಸಾಬೀತು: 8.50 ಲಕ್ಷ ವೇತನ ಬಾಕಿ ಮಂಜೂರು ಮಾಡಿ ಸರ್ಕಾರದ ಆದೇಶ
0
ಜನವರಿ 24, 2023




