HEALTH TIPS

ಕೃಷಿ ಭೀತಿಯ ಕಾಡು ಹಂದಿ ನಿರ್ಮೂಲನೆಗೆ ವೈಲ್ಡ್ ಲೈಫ್ ವಾರ್ಡನ್ (ಹಾನರಿ) ಕ್ರಮ ಕೈಗೊಂಡ ಜಿಲ್ಲೆಯ ಪ್ರಥಮ ಪಂಚಾಯತಾಗಿ ಮಾದರಿಯಾದ ಎಣ್ಮಕಜೆ


                ಪೆರ್ಲ: ಎಣ್ಮಕಜೆ ಪಂಚಾಯತಿ ವ್ಯಾಪ್ತಿಯಲ್ಲಿ ಕಾಡುಹಂದಿ ಉಪಟಳದಿಂದ ಕೃಷಿಕರು ಅನುಭವಿಸುವ ನಾಶ-ನಷ್ಟಗಳು ವ್ಯಾಪಕವಾಗಿದೆ. ಗಡಿನಾಡಾದ ಈ ಪ್ರದೇಶದ  ಕೃಷಿಕರು ಹಲವು ವರ್ಷಗಳಿಂದ ಎದುರಿಸುವ ಕಾಡುಹಂದಿ ಕಾಟದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ನಿಬಂಧನೆಯ ಪ್ರಕಾರ ಸುಸೂತ್ರವಾದ ಕ್ರಮಕೈಗೊಂಡ ಜಿಲ್ಲೆಯ ಪ್ರಪ್ರಥ ಪಂಚಾಯತಾಗಿ ಎಣ್ಮಕಜೆ ಗ್ರಾ.ಪಂ. ಮಾದರಿಯಾಗುತ್ತಿದೆ.
        ಸರ್ಕಾರ ಅನುಮತಿಸಲ್ಪಟ್ಟ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 5(2) ಪ್ರಕಾರ ಡೆಲಿಕೇಟ್ ಮಾಡಿ ಲಭಿಸಿದ ವೈಲ್ಡ್ ಲೈಫ್ ವಾರ್ಡನ್ (ಹಾನರಿ) ಅಧಿಕಾರ ಬಳಸಿಕೊಂಡು ಅಂಗೀಕೃತ ಶೂಟರ್ ಗಳಿಗೆ ಜವಾಬ್ದಾರಿ ನೀಡಿ ಅದೇಶ ಹಂದಿ ಕಾಟ ನಿಗ್ರಹ ಹಾಗೂ ಸೂಕ್ತ ಸಂಸ್ಕರಣಾ ರೀತಿಗೆ ಆದೇಶ ಕ್ರಮ ಕೈಗೊಂಡ ಪ್ರಥಮ ಪಂಚಾಯತಾಗಿ ಗಡಿನಾಡಿನಲ್ಲಿ ಗುರುತಿಸಲ್ಪಟ್ಟಿದೆ.
          ಜಿಲ್ಲೆಯ ಎಲ್ಲೆಡೆಯೂ ಗ್ರಾಮೀಣ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳ ವ್ಯಾಪಕಗೊಂಡಿದ್ದರೂ ಸರಕಾರ ನಿಬಂಧನೆಯ ಈ ಕ್ರಮಕೈಗೊಳ್ಳುವಲ್ಲಿ ಯಾವುದೇ ಪಂಚಾಯತ್ ಮುತುವರ್ಜಿವಹಿಸದ ನಡುವೆ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಈ ಬಗ್ಗೆ ಕಾಳಜಿವಹಿಸಿ ಕ್ರಮಕೈಗೊಂಡಿರುವುದು ಕೃಷಿಕರ ಪ್ರಶಂಸನೆಗೆ ಪಾತ್ರವಾಗಿದೆ.
          ಸ್ವತಃ ಕೃಷಿಕರೂ ಆಗಿರುವ ಇವರು ರಾಜ್ಯದ ಒಟ್ಟಂಪಾಲ ಮಾದರಿಯಲ್ಲಿ ಕಾಡು ಹಂದಿ ನಿಗ್ರಹಕ್ಕೆ ಆದೇಶ ಹೊರಡಿಸಿ ತಂಡ ಸಜ್ಜಾಗಿಸಿದ್ದು  ಸರ್ಕಾರಿ ನಿಬಂಧನೆಯ ಈ  ಕಾರ್ಯಚರಣೆಯ ಯಶಸ್ವಿಗೆ ಜನರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries